SHIVAMOGGA LIVE NEWS | 11 DECEMBER 2023
SHIMOGA : ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ವ್ಯಾನಿಟಿ ಬ್ಯಾಗ್ನಿಂದ ನಗದು, ಚಿನ್ನಾಭರಣ ಕಳ್ಳತನ ಪ್ರಕರಣ ಮುಂದುವರೆದಿದೆ. ನಗರದ ಮಂಜುನಾಥ ಟಾಕೀಸ್ ಸಮೀಪದ ನಿವಾಸಿ ರೇಖಾ ಭಟ್ ಎಂಬುವವರ ವ್ಯಾನಿಟಿ ಬ್ಯಾಗ್ನಿಂದ ನೆಕ್ಲೇಸ್ ಮತ್ತು 500 ರೂ. ನಗದು ಕಳ್ಳತನ ಮಾಡಲಾಗಿದೆ.
ಸಾಗರದಲ್ಲಿ ಸಂಬಂಧಿಯ ಮದುವೆ ಸಮಾರಂಭದಲ್ಲಿ ಭಾಗವಹಿಸಲು ರೇಖಾ ಭಟ್ ತಮ್ಮ ಪತಿಯೊಂದಿಗೆ ತೆರಳುತ್ತಿದ್ದರು. KSRTC ಬಸ್ ನಿಲ್ದಾಣದಲ್ಲಿ ಡಿ.7ರಂದು ಬೆಳಗ್ಗೆ 9.30ರ ಹೊತ್ತಿಗೆ ಶಿವಮೊಗ್ಗ – ಸಾಗರ ಬಸ್ ಹತ್ತಿದ್ದರು. ಬಸ್ಸು ಕುಂಸಿ ಸಮೀಪ ತೆರಳಿದ್ದಾಗ ಪತಿಗೆ ಬಿ.ಪಿ ಮಾತ್ರೆ ಕೊಡಲೆಂದು ವ್ಯಾನಿಟಿ ಬ್ಯಾಗ್ನತ್ತ ಕಣ್ಣು ಹೊರಳಿಸಿದಾಗ ಜಿಪ್ ತೆಗೆದಿರುವುದು ಗೊತ್ತಾಗಿದೆ. ಬ್ಯಾಗ್ನಲ್ಲಿದ್ದ ಪರ್ಸ್ ನಾಪತ್ತೆಯಾಗಿತ್ತು. ಅದರಲ್ಲಿ 50 ಸಾವಿರ ರೂ. ಮೌಲ್ಯದ ನೆಕ್ಲೇಸ್ ಮತ್ತು 500 ರೂ. ನಗದು ಇತ್ತು.
ಕೆಎಸ್ಆರ್ಟಿಸಿ ನಿಲ್ದಾಣದಲ್ಲಿ ಬಸ್ ಹತ್ತುವ ಸಂದರ್ಭ ತಮ್ಮ ವ್ಯಾನಿಟಿ ಬ್ಯಾಗ್ ಜಿಪ್ ತೆಗೆದು ನೆಕ್ಲೇಸ್ ಮತ್ತು ಹಣವಿದ್ದ ಪರ್ಸ್ ಕಳ್ಳತನ ಮಾಡಲಾಗಿದೆ ಎಂದು ಆರೋಪಿಸಿ ರೇಖಾ ಭಟ್ ದೂರು ನೀಡಿದ್ದಾರೆ. ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ – ಜನ ಶತಾಬ್ದಿ, ಇಂಟರ್ಸಿಟಿ ವಿರುದ್ಧ ದೂರು, ಬಳಕೆದಾರರ ಸಭೆಯಲ್ಲಿ ಏನೇನೆಲ್ಲ ಚರ್ಚೆಯಾಯ್ತು? ಇಲ್ಲಿದೆ 7 ಪಾಯಿಂಟ್
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200