SHIVAMOGGA LIVE NEWS | 27 APRIL 2024
SHIMOGA : ಪೊಲೀಸ್ ಅಧಿಕಾರಿಗಳಂತೆ ನಟಿಸಿ ಮಹಿಳೆಯೊಬ್ಬರ ಚಿನ್ನಾಭರಣ ಕಳವು ಮಾಡಲಾಗಿದೆ. ಶಿವಮೊಗ್ಗದ ಜೈಲ್ ವೃತ್ತದಲ್ಲಿ ಘಟನೆ ಸಂಭವಿಸಿದೆ. ಹೊಸಮನೆ ಬಡಾವಣೆ ನಿವಾಸಿ ಶಂಕರಮ್ಮ ಎಂಬುವವರು ಪೋಸ್ಟ್ ಆಫೀಸ್ಗೆ ತೆರಳುತ್ತಿದ್ದಾಗ ಪೊಲೀಸ್ ಅಧಿಕಾರಿ ಎಂದು ನಂಬಿಸಿ ಚಿನ್ನಾಭರಣ ಕದ್ದು ವಂಚಿಸಲಾಗಿದೆ.
‘ರವಿ ಸರ್ ಕರೆಯುತ್ತಿದ್ದಾರೆʼ
ಜೈಲ್ ವೃತ್ತದ ಬಳಿ ಗೌರಮ್ಮ ಅವರನ್ನು ತಡೆದ ವ್ಯಕ್ತಿಯೊಬ್ಬ ‘ರವಿ ಸರ್ ಕರೆಯುತ್ತಿದ್ದಾರೆ’ ಎಂದು ತಿಳಿಸಿದ. ಆತನ ಬಳಿ ಹೋದಾಗ, ‘ಯುವತಿ ಒಬ್ಬಳಿಗೆ ಬೆಳಗ್ಗೆ ಚಾಕು ತೋರಿಸಿ ಚಿನ್ನಾಭರಣ ಕಳ್ಳತನ ಮಾಡಲಾಗಿದೆ. ಅದರ ತನಿಖೆ ನಡೆಸುತ್ತಿದ್ದೇವೆʼ ಎಂದು ನಂಬಿಸಿದರು. ಗೌರಮ್ಮ ಅವರ ಬಂಗಾರದ ಸರ, ಉಂಗುರಗಳನ್ನು ಬಿಚ್ಚಿಸಿ ಪೇಪರ್ ಕವರ್ನಲ್ಲಿ ಹಾಕುವಂತೆ ಮಾಡಿದರು. ಬಳಿಕ ಪೇಪರ್ ಕವರನ್ನು ಗೌರಮ್ಮ ಅವರ ಬ್ಯಾಗಿನಲ್ಲಿರಿಸಿದರು.
ಸ್ವಲ್ಪ ದೂರ ಹೋದಾಗ ಕಾದಿತ್ತು ಆಘಾತ
ಜೈಲ್ ಸರ್ಕಲ್ನಿಂದ ಸ್ವಲ್ಪ ದೂರ ತೆರಳಿದ ಗೌರಮ್ಮ ಬ್ಯಾಗ್ನಲ್ಲಿದ್ದ ಪೇಪರ್ ಕವರ್ ತೆಗೆದಾಗ ಆಘಾತ ಕಾದಿತ್ತು. ಪೇಪರ್ ಕವರ್ನಲ್ಲಿ ಚಿನ್ನದ ಆಭರಣಗಳು ಇರಲಿಲ್ಲ. ಜೈಲ್ ಸರ್ಕಲ್ ಬಳಿ ಬಂದಾಗ ಆರೋಪಿಗಳು ಪರಾರಿಯಾಗಿದ್ದರು. 2.40 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳ್ಳತನವಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಘಟನೆ ಸಂಬಂಧ ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ – ಶಿವಮೊಗ್ಗಕ್ಕೆ ಬರ್ತಿದ್ದಾರೆ ರಾಹುಲ್ ಗಾಂಧಿ, ಸಿನಿಮಾ ನಟ, ನಟಿಯರು, ಯಾವಾಗ, ಎಲ್ಲೆಲ್ಲಿ ಭೇಟಿ ಕೊಡ್ತಾರೆ?
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200