SHIVAMOGGA LIVE NEWS | STONE PELTING | 07 ಮೇ 2022
ಶಿವಮೊಗ್ಗದ ಸೂಳೆಬೈಲಿನಲ್ಲಿ ಕಳೆದ ರಾತ್ರಿ ಕಾರಿನ ಮೇಲೆ ಕಲ್ಲು ತೂರಿದ ಘಟನೆ ಸಂಬಂಧ ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಹರಿಕೃಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ಹರಿಕೃಷ್ಣ ಅವರು ತೆರಳುತ್ತಿದ್ದ ಕಾರಿನ ಮೇಲೆ ದಾಳಿಯಾಗಿದೆ ಎಂದು ವದಂತಿ ಹರಡಿತ್ತು. ಈ ಹಿನ್ನೆಲೆಯಲ್ಲಿ ಅವರು ಇವತ್ತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ. ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200
ಹರಿಕೃಷ್ಣ ಹೇಳಿದ್ದೇನು?
ಪಾಯಿಂಟ್ 1 – ನನ್ನ ಗೆಳೆಯರ ಕಾರಿನ ಮೇಲೆ ದಾಳಿಯಾಗಿದೆ. ಆ ಕಾರಿನಲ್ಲಿ ನಾನು ಇರಲ್ಲಿಲ್ಲ. ಅದು ನನ್ನ ಕಾರು ಕೂಡ ಅಲ್ಲ. ಕೆಲವು ಪತ್ರಿಕೆ, ಮಾಧ್ಯಮಗಳಲ್ಲಿ ತಾವು ಇದ್ದ ಕಾರಿನ ಮೇಲೆ ದಾಳಿಯಾಗಿದೆ ಎಂದು ವರದಿಯಾಗಿದೆ. ಆದರೆ ತಾನು ಕಾರಿನಲ್ಲಿ ಇರಲಿಲ್ಲ.
ಪಾಯಿಂಟ್ 2 – ಸೂಳೆಬೈಲು ಭಾಗದಲ್ಲಿ ಮುಸ್ಲಿಂ ಬಾಹುಳ್ಯ ಹಚ್ಚಿದೆ. ಈ ಭಾಗದಲ್ಲಿ ಮುಸ್ಲಿಮರು ಅಲ್ಲಲ್ಲಿ ಗುಂಪುಗೂಡಿ ನಿಲ್ಲುತ್ತಾರೆ. ಕಳೆದೊಂದು ವಾರದಿಂದ ಸಣ್ಣ ಪ್ರಮಾಣ ಹಿಂಸೆ ಆರಂಭಿಸಿದ್ದಾರೆ. ಹಿಂದೂಗಳನ್ನು ಪ್ರಚೋದಿಸುತ್ತಿದ್ದಾರೆ. ಜಗಳಕ್ಕೆ ಕರೆಯುವಂತೆ ಮಾಡುತ್ತಿದ್ದಾರೆ.
ಪಾಯಿಂಟ್ 3 – ಅನೇಕ ಹಿಂದೂಗಳು ಈ ಹಿಂಸೆ ಅನುಭವಿಸಿದ್ದಾರೆ. ಹಾಗಾಗಿಯೆ ರಾತ್ರಿ ವಿಚಾರ ತಿಳಿಯುತ್ತಿದ್ದಂತೆ ಎಲ್ಲರೂ ಒಗ್ಗೂಡಿ ಪ್ರತಿಭಟನೆ ನಡೆಸಿದರು.
ಪಾಯಿಂಟ್ 4 – ಹರ್ಷ ಹತ್ಯೆ ಬಳಿಕ ಈ ರೀತಿಯ ಘಟನೆಗಳು ಇನ್ನೊಂದೆರಡು ಕಡೆ ನಡೆದಿದೆ. ಪೊಲೀಸ್ ಇಲಾಖೆ ಇದನ್ನು ಬೇರೆ ಬೇರೆ ಘಟನೆಯಾಗಿ ಪರಿಗಣಿಸಬಾರದು. ಇದು ಕೋಮು ಗಲಭೆಯಲ್ಲ. ಹಿಂದೂ ಸಮಾಜವನ್ನು ಗುರಿಯಾಗಿಸಿಕೊಂಡು ನಡೆಸುತ್ತಿರುವ ದಾಳಿ.
ಪಾಯಿಂಟ್ 5 – ಕಳೆದ ರಾತ್ರಿಯೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಕರೆ ಮಾಡಿದ್ದರು. ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಪೊಲೀಸರಿಗು ಕೂಡ ಕಾನೂನು ಕ್ರಮ ಕೈಗೊಳ್ಳುವ ಕುರಿತು ನಿರ್ದೇಶನ ನೀಡಿದ್ದಾರೆ.
ಇದನ್ನೂ ಓದಿ – ಶಿವಮೊಗ್ಗದಲ್ಲಿ ಕಾರಿನ ಮೇಲೆ ಕಲ್ಲು ತೂರಾಟ, ಗ್ಲಾಸ್ ಪೀಸ್, ಪೀಸ್, ಬಿಗುವಿನ ವಾತಾವರಣ