SHIVAMOGGA LIVE NEWS | 6 APRIL 2024
SHIMOGA : ಲಂಚದ ಹಣ ಸ್ವೀಕರಿಸುವಾಗ ಶಿವಮೊಗ್ಗ ಸಿಇಎನ್ ಪೊಲೀಸ್ ಠಾಣೆ ಎಎಸ್ಐ, ರೆಹಮಾನ್ ಲೋಕಾಯುಕ್ತರ ಬಲೆಗೆ ಬಿದ್ದಿದ್ದು, ಅವರನ್ನು ಬಂಧಿಸಲಾಗಿದೆ.
ಆರ್ಎಂಎಲ್ ನಗರದ ಮಹಮದ್ ರಫೀಕ್ ಎಂಬಾತ ನೀಡಿದ ದೂರಿನ ಆಧಾರದ ಮೇಲೆ ಶುಕ್ರವಾರ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತರು 1 ಲಕ್ಷ ರೂ. ಲಂಚದ ಹಣ ಸಮೇತ ರೆಹಮಾನ್ನನ್ನು ಬಂಧಿಸಿದ್ದಾರೆ. ಜೂಜು ಅಡ್ಡೆ ವ್ಯವಹಾರಕ್ಕೆ ಸಂಬಂಧಿಸಿ ಏ.4ರಂದು ರಫೀಕ್ನನ್ನು ನಗರದ ಕೆಎಸ್ ಆರ್ಟಿಸಿ ಬಸ್ ನಿಲ್ದಾಣದ ಬಳಿ ಕರೆದು ಪ್ರತಿ ತಿಂಗಳು 30 ಸಾವಿರ ರೂ.ನಂತೆ ಒಟ್ಟು 1.20 ಲಕ್ಷ ರೂ. ನೀಡಬೇಕೆಂದು ರೆಹಮಾನ್ ಸೂಚಿಸಿದ್ದಾರೆ ಎಂದು ಆರೋಪಿಸಲಾಗಿದೆ. ಅದಕ್ಕೆ ಒಪ್ಪಿಕೊಳ್ಳದೇ 1 ಲಕ್ಷ ರೂ. ನೀಡುವುದಾಗಿ ಒಪ್ಪಿಕೊಂಡಿದ್ದೆ ಎಂದು ದೂರಿನಲ್ಲಿ ರಫೀಕ್ ತಿಳಿಸಿದ್ದಾನೆ. ಅದರಂತೆ, ಹಣ ಸ್ವೀಕರಿಸುವಾಗ ಪೊಲೀಸ್ ಅಧಿಕಾರಿ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾನೆ.
ಇದನ್ನೂ ಓದಿ – ಜಿಂಕೆ ಬೇಟೆಯಾಡಿದ್ದ ಮೂವರು ಬಂದೂಕು ಸಹಿತ ಅರೆಸ್ಟ್, ಸಿಕ್ಕಿಬಿದ್ದಿದ್ದು ಹೇಗೆ?