SHIVAMOGGA LIVE | 5 AUGUST 2023
SHIMOGA : ಕ್ಯಾಂಟೀನ್ನಲ್ಲಿ ಟೀ ಮತ್ತು ಸಿಗರೇಟ್ನ ಹಣ ಕೇಳಿದ ಮಾಲೀಕನ ಮೇಲೆ ಗ್ರಾಹಕನೊಬ್ಬ ಹಲ್ಲೆ ನಡೆಸಿದ್ದಾನೆ. ಟೀ ಗ್ಲಾಸ್ನಿಂದಲೇ (Tea Glass) ಕ್ಯಾಂಟೀನ್ ಮಾಲೀಕನ ತಲೆಗೆ ಹೊಡೆದು ಗಾಯಗೊಳಿಸಿದ್ದಾನೆ.
ಹಳೆ ಮಂಡ್ಲಿಯ ಅಮೃತ ರೈಸ್ ಮಿಲ್ ಸಮೀಪ ಇರುವ ಸಯ್ಯದ್ ನಜರುಲ್ಲಾ ಎಂಬುವವರ ಟೀ ಕ್ಯಾಂಟೀನ್ನಲ್ಲಿ ಘಟನೆ ಸಂಭವಿಸಿದೆ. ಅಜೀಜ್ ಖಾನ್ ಎಂಬಾತ ಕ್ಯಾಂಟೀನ್ಗೆ ಬಂದು ಟೀ ಕುಡಿದು, ಸಿಗರೇಟ್ ಪಡೆದು ಸೇದಿದ್ದಾನೆ. ಹಣ ಕೇಳಿದಾಗ ಮಾಲೀಕ ಸಯ್ಯದ್ ನಜರುಲ್ಲಾ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಇದನ್ನೂ ಓದಿ – ಕೆಎಸ್ಆರ್ಟಿಸಿ ಬಸ್ ಪಲ್ಟಿ, ತಪ್ಪಿತು ದೊಡ್ಡ ಅನಾಹುತ, ಘಟನೆಗೆ ಕಾರಣವೇನು?
ಅಜೀಜ್ ಖಾನ್ ಗಾಜಿನ ಟೀ ಗ್ಲಾಸ್ನಿಂದ (Tea Glass) ಮಾಲೀಕನ ತಲೆಗೆ ಹೊಡೆದಿದ್ದಾನೆ. ಕೊರಳ ಪಟ್ಟಿ ಹಿಡಿದು ತಲೆಗೆ ಡಿಚ್ಚಿ ಹೊಡೆದಿದ್ದಾನೆ. ಕ್ಯಾಂಟೀನ್ ಒಳಗೆ ನುಗ್ಗಿ ವಸ್ತುಗಳನ್ನು ಚಲ್ಲಾಪಿಲ್ಲಿ ಮಾಡಿ ನಷ್ಟ ಉಂಟು ಮಾಡಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಘಟನೆ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.