SHIVAMOGGA LIVE NEWS | 2 ಮಾರ್ಚ್ 2022
ಹೊಸಮನೆ ಬಡಾವಣೆಯಲ್ಲಿ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದ ವ್ಯಕ್ತಿ ಮೃತಪಟ್ಟಿದ್ದಾರೆ. ಘಟನೆ ಸಂಬಂಧ ಮಹಿಳೆ ಮತ್ತು ಆಕೆಯ ಮಗನ ವಿರುದ್ಧ ಪ್ರಕರಣ ದಾಖಲಾಗಿದೆ.
ಮಂಜುನಾಥ್ (46) ಹೊಸಮನೆ ಬಡಾವಣೆಯ 5ನೇ ತಿರುವಿನ ಮನೆಯೊಂದರ ಮುಂದೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದರು. ಕೂಡಲೆ ಸ್ಥಳೀಯರು ಬೆಂಕಿ ನಂದಿಸಿ ಮಂಜುನಾಥ್ ಅವರ ರಕ್ಷಿಸಿದ್ದರು.
ಇದನ್ನೂ ಓದಿ | ಹೊಸಮನೆಯಲ್ಲಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡ ವ್ಯಕ್ತಿ
ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಮಂಜುನಾಥ್ ಅವರು ಕೊನೆ ಉಸಿರೆಳೆದಿದ್ದಾರೆ.
ಮಹಿಳೆ, ಮಗನ ವಿರುದ್ಧ ಕೇಸ್
ಮಂಜುನಾಥ್ ಸಾವಿಗೆ ಮಹಿಳೆಯೊಬ್ಬಳು ಮತ್ತು ಆಕೆಯ ಮಗನೆ ಕಾರಣ ಎಂದು ಪ್ರಕರಣ ದಾಖಲಾಗಿದೆ. ಮಂಜುನಾಥ್ ಅವರ ಪತ್ನಿ ದೊಡ್ಡಪೇಟೆ ಠಾಣೆಯಲ್ಲಿ ದೂರು ನೀಡಿದ್ದಾರೆ. ‘ಮಹಿಳೆ ಒಬ್ಬಳ ಜೊತೆಗೆ ಮಂಜುನಾಥ್ ಅವರಿಗೆ ಸಲುಗೆ ಇತ್ತು. 25 ಲಕ್ಷ ರೂ. ಹಣ ನೀಡಿದ್ದರು. ಅದನ್ನು ಹಿಂತಿರುಗಿ ಕೇಳಿದ್ದಕ್ಕೆ ಮಂಜುನಾಥ್ ವಿರುದ್ಧ ಆಕೆ ಮತ್ತು ಅಕೆಯ ಮಗ ಹೊಡೆದಿದ್ದರು’ ಎಂದು ದೂರಿನಲ್ಲಿ ತಿಳಿಸಲಾಗಿದೆ.
ದೊಡ್ಡಪೇಟೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ.