SHIVAMOGGA LIVE NEWS | 29 APRIL 2024
THIRTHAHALLI : ಯಾರೂ ಇಲ್ಲದ ವೇಳೆ ಮನೆಯ ಬೀಗ ತೆಗೆದು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ, ನಗದು ಕಳ್ಳತನ ಮಾಡಲಾಗಿದೆ. ಮನೆಯ ಮುಂಬಾಗಿಲಿನ ಬೀಗ ಕಳವು ಮಾಡಿ, ಯಾರೂ ಇಲ್ಲದ ವೇಳೆ ಕೃತ್ಯ ಎಸಗಲಾಗಿದೆ. ತೀರ್ಥಹಳ್ಳಿ ಸೀಬನಕೆರೆಯ ಸುರುಳಿಬೈಲು ಗ್ರಾಮದ ಹೊನ್ನಾಣಿಯ ತಿಮ್ಮಪ್ಪ ಅವರ ಮನೆಯಲ್ಲಿ ಘಟನೆ ಸಂಭವಿಸಿದೆ.
ಸೊಸೈಟಿಗೆ ಹಣ ಕಟ್ಟಲು ಬೀರು ತೆಗೆದಾಗ
ತಿಮ್ಮಪ್ಪ ಅವರು ಫೆಬ್ರವರಿ 19ರಂದು ಸೊಸೈಟಿಗೆ ಹಣ ಕಟ್ಟಲು ಬೀರು ತೆಗೆದಾಗ ನಗದು, ಚಿನ್ನಾಭರಣ ಕಳ್ಳತನ ಆಗಿರುವುದು ಗೊತ್ತಾಗಿದೆ. ಬೀರುವಿನಲ್ಲಿದ್ದ ಉಳಿದ ವಸ್ತುಗಳು ಹಾಗೆಯೇ ಇದ್ದವು. ಆದರೆ ಚಿನ್ನಾಭರಣ, ನಗದು ಮಾತ್ರ ಕಳ್ಳತನವಾಗಿತ್ತು. 40.36 ಲಕ್ಷ ರೂ. ಮೌಲ್ಯ ಚಿನ್ನಾಭರಣ ಮತ್ತು ನಗದು ಕಳುವಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಮನೆಯ ಬೀಗ ಕದ್ದು ಆಮೇಲೆ ಕೃತ್ಯ
ಫೆ.5ರಂದು ಮಧ್ಯಾಹ್ನ ತಿಮ್ಮಪ್ಪ ಅಂಗಡಿಗೆ ತೆರಳಿದ್ದರು. ಅವರ ಪತ್ನಿ ತೋಟದಲ್ಲಿ ಕಾಳು ಮೆಣಸು ಕೊಯ್ಯುವ ಕೆಲಸ ನೋಡಿ ಬರಲು ಹೋಗಿದ್ದರು. ಮರಳಿ ಬರುವ ಹೊತ್ತಿಗೆ ಮನೆ ಮುಂದೆ ಬೈಕ್ ಒಂದು ವೇಗವಾಗಿ ಹೋಗಿತ್ತು. ಆ ದಿನ ಅಡುಗೆ ಮನೆಯಲ್ಲಿಟ್ಟದ್ದ ಪರ್ಸ್ ಕಳ್ಳತನವಾಗಿತ್ತು. ಅದರಲ್ಲಿ ಮನೆಯ ಬೀಗ ಇತ್ತು. ಫೆ.18 ರಂದು ಕುಟುಂಬದವರು ಹೆಬ್ರಿಗೆ ತೆರಳಿದ್ದಾಗ ಕಳ್ಳತನವಾಗಿದೆ ಎಂದು ಆರೋಪಿಸಲಾಗಿದೆ. ಘಟನೆ ಸಂಬಂಧ ತಡವಾಗಿ ದೂರು ನೀಡುತ್ತಿರುವುದಾಗಿ ತಿಳಿಸಲಾಗಿದೆ. ತೀರ್ಥಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ – ಇನ್ನು ಎಂಟೆ ದಿನ ಬಾಕಿ, ಯಾವ್ಯಾವ ಅಭ್ಯರ್ಥಿಗಳು ಯಾವೆಲ್ಲ ಅಜೆಂಡ ಇಟ್ಟುಕೊಂಡು ಪ್ರಚಾರ ನಡೆಸ್ತಿದ್ದಾರೆ?
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200