SHIVAMOGGA LIVE | 31 JULY 2023
SHIMOGA : ಬಾಗಿಲಿಗೆ ಚಿಲಕ (Lock) ಹಾಕದೆ ಮಲಗಿದ್ದಾಗ ಮನೆಯಲ್ಲಿದ್ದ ನಗದು ಮತ್ತು ಒಣ ಅಡಿಕೆ ಕಳ್ಳತನವಾಗಿದೆ. ಮನೆಯಲ್ಲಿ ಕೆಲಸಕ್ಕಿದ್ದ ದಂಪತಿಯೇ ಕಳ್ಳತನ ಮಾಡಿ ಪರಾರಿಯಾಗಿದ್ದಾರೆ ಎಂದು ಆರೋಪಿಸಲಾಗಿದ್ದು, ತಡವಾಗಿ ಪ್ರಕರಣ ದಾಖಲಾಗಿದೆ.
ಹರಮಘಟ್ಟದ ಗ್ರಾಮದ ಹರೀಶ್ ಎಂಬುವವರ ಮನೆಯಲ್ಲಿ ಘಟನೆ ಸಂಭವಿಸಿದೆ. ಹರೀಶ್ ಅವರು ಜು.11ರಂದು ತಮ್ಮ ಮನೆಯ ಬಾಗಿಲಿಗೆ ಚಿಲಕ (Lock) ಹಾಕುವುದನ್ನು ಮರೆತು ರಾತ್ರಿ 10 ಗಂಟೆ ಹೊತ್ತಿಗೆ ಮಲಗಿದ್ದರು. ಈ ಸಂದರ್ಭ ಮನೆಯ ಟಿವಿ ಶೋಕೇಸ್ನಲ್ಲಿದ್ದ 23,500 ರೂ. ನಗದು, ಕೊಟ್ಟಿಗೆಯಲ್ಲಿದ್ದ 35 ಕೆ.ಜಿ ಒಣ ಅಡಿಕೆ ಕಳ್ಳತನವಾಗಿದೆ. ಇದರ ಮೌಲ್ಯದ ಅಂದಾಜು 20 ಸಾವಿರ ರೂ. ಇದೆ ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ – ಜಲಪಾತದ ಬಳಿ ಶರತ್ ಮೃತದೇಹ ಪತ್ತೆ, ಮನೆಗೆ ಬಂದ ಸಂಸದ ರಾಘವೇಂದ್ರಗೆ ಕುಟುಂಬದಿಂದ ‘ಒಂದು ಮನವಿʼ
ಕೆಲಸಕ್ಕಿದ್ದ ದಂಪತಿ ನಾಪತ್ತೆ
ಹರೀಶ್ ಅವರ ಮನೆಯಲ್ಲಿ ನ್ಯಾಮತಿಯ ರಮೇಶ್ ಮತ್ತು ಆತನ ಪತ್ನಿ ಭಾಗ್ಯ ಎಂಬುವವರು ಕಳೆದ ಒಂದು ವರ್ಷದಿಂದ ಜಮೀನು ಕೆಲಸ ಮಾಡುತ್ತಿದ್ದರು. ಜು.11ರ ರಾತ್ರಿ ನಗದು ಮತ್ತು ಅಡಿಕೆ ಕಳ್ಳತನ ಮಾಡಿಕೊಂಡು ದಂಪತಿ ಬೈಕಿನಲ್ಲಿ ಪರಾರಿಯಾಗಿದ್ದಾರೆ. ಇದನ್ನು ಊರಿನ ಕೆಲವರು ಕಂಡಿದ್ದಾರೆ ಎಂದು ಹರೀಶ್ ದೂರಿನಲ್ಲಿ ಆರೋಪಿಸಿದ್ದಾರೆ.
ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200