ಶಿವಮೊಗ್ಗದ ಲೈವ್.ಕಾಂ | SHIMOGA NEWS | 30 ಡಿಸೆಂಬರ್ 2021
ಕ್ಷುಲಕ ವಿಚಾರಕ್ಕೆ ಅಣ್ಣ, ತಮ್ಮನ ಮಧ್ಯೆ ಗಲಾಟೆಯಾಗಿದ್ದು, ಒಬ್ಬನ ಕೊಲೆಯಾಗಿದೆ. ಶಿವಮೊಗ್ಗದ ಬೊಮ್ಮನಕಟ್ಟೆಯಲ್ಲಿ ಕಳೆದ ರಾತ್ರಿ ಘಟನೆ ಸಂಭವಿಸಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಗುರುಪ್ರಸಾದ್ (26) ಮೃತ ವ್ಯಕ್ತಿ. ಬುಧವಾರ ರಾತ್ರಿ ಗುರುಪ್ರಸಾದ್ ತನ್ನ ತಾಯಿಯೊಂದಿಗೆ ಜಗಳಕ್ಕೆ ಇಳಿದಿದ್ದ. ಈ ಸಂದರ್ಭ ಸಹೋದರ ವಿಶ್ವನಾಥ್ ಮಧ್ಯ ಪ್ರವೇಶಿಸಿದ್ದ. ಆಗ ಸಹೋದರರ ಮಧ್ಯೆ ಮಾತಿಗೆ ಮಾತು ಬೆಳೆದು ಗುರುಪ್ರಸಾದ್ ಕೊಲೆಯಾಗಿದೆ.
ಗಲಾಟೆಗೆ ಕಾರಣವೇನು?
ತನಗೆ ಆಟೋ ಒಂದನ್ನು ಕೊಡಿಸುವಂತೆ ಗುರುಪ್ರಸಾದ್ ತನ್ನ ತಾಯಿಯಲ್ಲಿ ಕೇಳಿದ್ದ. ಬುಧವಾರ ರಾತ್ರಿ ಇದೆ ವಿಚಾರಕ್ಕೆ ತಾಯಿಯೊಂದಿಗೆ ಜಗಳ ಆರಂಭಿಸಿದ್ದ. ಆಟೋ ಕೊಡಿಸಬೇಕು, ಇಲ್ಲವಾದಲ್ಲಿ ಆಸ್ತಿಯಲ್ಲಿ ಪಾಲು ನೀಡುವಂತೆ ಒತ್ತಾಯಿಸಿದ. ಈ ಸಂದರ್ಭ ಸಹೋದರ ವಿಶ್ವನಾಥ್ ಮಧ್ಯ ಪ್ರವೇಶಿಸಿದ್ದ.
ತಾನೇ ದುಡಿದು ಆಟೋ ಖರೀದಿಸುವಂತೆ ವಿಶ್ವನಾಥ್ ತನ್ನ ಸಹೋದರ ಗುರುಪ್ರಸಾದ್’ಗೆ ಸಲಹೆ ನೀಡಿದ. ಆಗ ಇಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದಿದೆ. ಸಿಟ್ಟಿಗೆದ್ದ ವಿಶ್ವನಾಥ್, ಗಾರೆ ಕೆಲಸಕ್ಕೆ ಬಳಸುವ ಮಟ್ಟಗೋಲನ್ನು ತೆಗೆದುಕೊಂಡು ಗುರುಪ್ರಸಾದನ ತಲೆ ಮತ್ತು ಕಿವಿ ಭಾಗಕ್ಕೆ ಹಲ್ಲೆ ನಡೆಸಿದ್ದಾನೆ. ತೀವ್ರ ರಕ್ತಸ್ರಾವದಿಂದಾಗಿ ಗುರುಪ್ರಸಾದ್ ಮೃತಪಟ್ಟಿದ್ದಾನೆ.
ಘಟನೆ ಸಂಬಂಧ ವಿನೋಬನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.