SHIVAMOGGA LIVE | 21 JULY 2023
BHADRAVATHI : ಪತ್ನಿ ಮನೆಯಿಂದ ಹೊರೆಗೆ ಬಂದಿದ್ದ ರೌಡಿ ಶೀಟರ್ ಮೇಲೆ ದಾಳಿ (Attack) ನಡೆಸಿ ಹತ್ಯೆ ಮಾಡಲಾಗಿದೆ. ಮುಜ್ಜು ಅಲಿಯಾಸ್ ಮುಜಾಹಿದ್ (35) ಹತ್ಯೆಯಾದವನು.
ಭದ್ರಾವತಿಯ ಬೊಮ್ಮನಕಟ್ಟೆ ಬಡಾವಣೆ ಸಮೀಪ ಘಟನೆ ಸಂಭವಿಸಿದೆ. ಪತ್ನಿಯ ಮನೆಯಿಂದ ಹೊರ ಬಂದ ವೇಳೆ ಮುಜಾಹಿದ್ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ಗೇಟ್ ಮುಂದೆಯೇ ಮುಜಾಹಿದ್ ಮುಖ ಮತ್ತು ಕೈ ಮೇಲೆ ಮಾರಕಾಸ್ತ್ರಗಳಿಂದ ದಾಳಿ (Attack) ಮಾಡಲಾಗಿದೆ. ಗೇಟ್ ಪಕ್ಕದಲ್ಲೇ ಮುಜಾಹಿದ್ನ ಮೃತದೇಹ ಮತ್ತು ಬೈಕ್ ಬಿದ್ದಿದೆ.
ಇದನ್ನೂ ಓದಿ – ಬೈಕ್ ಚಲಾಯಿಸಿ ಸಿಕ್ಕಿಬಿದ್ದ ಮಗ, ಅಪ್ಪನಿಗೆ 25 ಸಾವಿರ ದಂಡ, ಕಾರಣವೇನು?
ಮುಜಾಹಿದ್ ವಿರುದ್ಧ ಕೊಲೆ ಮತ್ತು ಕೊಲೆ ಯತ್ನ ಸಂಬಂಧ ನಾಲ್ಕು ಪ್ರಕರಣ ದಾಖಲಾಗಿದ್ದವು. ಈತ ರೌಡಿ ಶೀಟರ್ ಆಗಿದ್ದ. ಪೇಪರ್ ಟೌನ್ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200