Shivamogga LiveShivamogga LiveShivamogga Live
Font ResizerAa
  • Home
  • NEWS
    • SHIVAMOGGA CITY
    • CRIME NEWS
    • SPORTS NEWS
    • LIFE STYLE
    • BUSINESS NEWS
    • EDUCATION NEWS
    • AGRICULTURE & APMC
    • 50 WORDS NEWS
    • 1 MINUTE NEWS
    • STATE HIGHLIGHTS
    • NATIONAL HIGHLIGHTS
  • TALUK NEWS
    • SHIVAMOGGA
    • BHADRAVATHI
    • THIRTHAHALLI
    • SAGARA
    • HOSANAGARA
    • SORABA
    • SHIKARIPURA
  • POLITICS
  • SPECIALS NEWS
    • AUTOMOBILES
    • CINEMA
    • DEGULA DARSHANA
    • FOOT PATH BADUKU
    • INSPIRATION
    • RANGABHOOMI
    • REAL ESTATE
    • TECHNOLOGY
  • ENGLISH NEWS
  • ADVERTISEMENTS
    • JOB JUNCTION
Shivamogga LiveShivamogga Live
Font ResizerAa
  • Home
  • NEWS
  • TALUK NEWS
  • POLITICS
  • SPECIALS NEWS
  • ENGLISH NEWS
  • ADVERTISEMENTS
  • Home
  • NEWS
    • SHIVAMOGGA CITY
    • CRIME NEWS
    • SPORTS NEWS
    • LIFE STYLE
    • BUSINESS NEWS
    • EDUCATION NEWS
    • AGRICULTURE & APMC
    • 50 WORDS NEWS
    • 1 MINUTE NEWS
    • STATE HIGHLIGHTS
    • NATIONAL HIGHLIGHTS
  • TALUK NEWS
    • SHIVAMOGGA
    • BHADRAVATHI
    • THIRTHAHALLI
    • SAGARA
    • HOSANAGARA
    • SORABA
    • SHIKARIPURA
  • POLITICS
  • SPECIALS NEWS
    • AUTOMOBILES
    • CINEMA
    • DEGULA DARSHANA
    • FOOT PATH BADUKU
    • INSPIRATION
    • RANGABHOOMI
    • REAL ESTATE
    • TECHNOLOGY
  • ENGLISH NEWS
  • ADVERTISEMENTS
    • JOB JUNCTION

Home » ಲಕ್ಷ ಲಕ್ಷದ ಸುಪಾರಿ ಕೊಟ್ಟು ತಂದೆಯನ್ನೆ ಕೊಲ್ಲಿಸಿದ ಮಕ್ಕಳು, ಒಬ್ಬ ಪೊಲೀಸ್ ಸೇರಿ 5 ಅರೆಸ್ಟ್

ಲಕ್ಷ ಲಕ್ಷದ ಸುಪಾರಿ ಕೊಟ್ಟು ತಂದೆಯನ್ನೆ ಕೊಲ್ಲಿಸಿದ ಮಕ್ಕಳು, ಒಬ್ಬ ಪೊಲೀಸ್ ಸೇರಿ 5 ಅರೆಸ್ಟ್

12/12/2022 6:12 PM
ನಿತಿನ್‌ ಕೈದೊಟ್ಲು

SHIVAMOGGA LIVE NEWS | 12 DECEMBER 2022

ಶಿಕಾರಿಪುರ : ಆಸ್ತಿಯಲ್ಲಿ ಪಾಲು ನೀಡಲು ನಿರಾಕರಿಸಿದ್ದಕ್ಕೆ ಮಕ್ಕಳೆ 5 ಲಕ್ಷ ರೂ. ಸುಪಾರಿ (supari) ನೀಡಿ ತಂದೆಯ ಹತ್ಯೆ ಮಾಡಿಸಿದ್ದಾರೆ. ಈಗ ಇಬ್ಬರು ಮಕ್ಕಳು ಸೇರಿ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

 

ಇವತ್ತಿನ ನ್ಯೂಸ್‌
» ಇವತ್ತಿನ ಎಲ್ಲ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ

shimoga nanjappa hospital

ಶಿಕಾರಿಪುರ ತಾಲೂಕು ಭೋಗಿ ಗ್ರಾಮದ ನಾಗೇಂದ್ರಪ್ಪ ಎಂಬಾತನ ಹತ್ಯೆ ಮಾಡಲಾಗಿದೆ. ಉಡುಗಣಿ ಕುಸ್ಕೂರು ಗ್ರಾಮದ ನಡುವೆ ನಿರ್ಮಾಣ ಹಂತದ ರಸ್ತೆ ಪಕ್ಕದ ಕಾಲುವೆಯಲ್ಲಿ ಮೃತದೇಹ ಪತ್ತೆಯಾಗಿತ್ತು. ಈ ಕುರಿತು ಶಿರಾಳಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಆಸ್ತಿ ಪಾಲು ಕೇಳಿದ್ದ ಮಕ್ಕಳು (supari)

ನಾಗೇಂದ್ರಪ್ಪ, ಭೋಗಿ ಗ್ರಾಮದಲ್ಲಿ ಐದೂವರೆ ಎಕೆರೆ ಜಮೀನು ಹೊಂದಿದ್ದಾರೆ. 5 ಎಕರೆಯಲ್ಲಿ ಅಡಕೆ ತೋಟ, ಅರ್ಧ ಎಕರೆ ಭತ್ತದ ಗದ್ದೆ ಮಾಡಿದ್ದಾರೆ. ಮಕ್ಕಳಾದ ಮಂಜುನಾಥ ಮತ್ತು ಉಮೇಶ, ಆಸ್ತಿಯಲ್ಲಿ ಪಾಲು ಕೇಳಿದ್ದಾರೆ. ಆಗ ನಾಗೇಂದ್ರಪ್ಪ ನಿರಾಕರಿಸಿದ್ದರು. ಇದೆ ವಿಚಾರವಾಗಿ ಪಂಚಾಯಿತಿ ಸೇರಿಸಿ ಮೂರು ಭಾಗ ಮಾಡಿಕೊಳ್ಳಲು ತೀರ್ಮಾನವಾಗಿತ್ತು. ಆದರೆ ನಾಗೇಂದ್ರಪ್ಪ ಸರ್ವೆಗೆ ತಕರಾರು ತೆಗೆದಿದ್ದರು. ಹಾಗಾಗಿ ಮಗ ಉಮೇಶ ಭದ್ರಾವತಿ ನ್ಯಾಯಾಲಯದಲ್ಲಿ ದಾವೆ ಹೂಡಿದ್ದ ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಎರಡನೆ ಮದುವೆ, ಮಗು (supari)

2021ರ ನವೆಂಬರ್ ತಿಂಗಳಲ್ಲಿ ನಾಗೇಂದ್ರಪ್ಪ ಎರಡನೆ ಮದುವೆಯಾಗಿದ್ದ. ಆರು ತಿಂಗಳ ಹಿಂದೆ ಎರಡನೆ ಹೆಂಡತಿಗೆ ಗಂಡು ಮಗುವಾಗಿದೆ. ನಾಗೇಂದ್ರಪ್ಪ ಹೊಸದಾಗಿ ಮನೆ ಕಟ್ಟಿಸುತ್ತಿದ್ದು, ಎರಡನೆ ಹೆಂಡತಿ ಹೆಸರಿಗೆ ದಾನ ಪತ್ರ ಮಾಡಿಸಿದ್ದರು. ಉಳಿದ ಆಸ್ತಿಯನ್ನು ಎರಡನೆ ಪತ್ನಿ ಹೆಸರಿಗೆ ಮಾಡಿಬಿಡುತ್ತಾನೆ ಎಂದು ಮಕ್ಕಳಾದ ಮಂಜುನಾಥ ಮತ್ತು ಉಮೇಶ ಯೋಚಿಸಿದರು. ಇದೆ ಕಾರಣಕ್ಕೆ ತಂದೆ ನಾಗೇಂದ್ರಪ್ಪನ ಹತ್ಯೆಗೆ ಸುಪಾರಿ ನೀಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

5 ಲಕ್ಷ ರೂ.ಗೆ ಸುಪಾರಿ (supari)

ನಾಗೇಂದ್ರಪ್ಪನ ಹತ್ಯೆಗೆ ಭೋಗಿ ಗ್ರಾಮದ ರಿಜ್ವಾನ್, ಶಿಕಾರಿಪುರದ ಹಬೀಬುಲ್ಲಾ, ಸುಹೈಲ್ ಎಂಬುವವರಿಗೆ 5 ಲಕ್ಷ ರೂ.ಗೆ ಸುಪಾರಿ ಕೊಡಲಾಗಿತ್ತು. 2022ರ ನ.9ರಂದು ಕುಸ್ಕೂರು ಗ್ರಾಮದ ಬಳಿ ನಾಗೇಂದ್ರಪ್ಪ ಹತ್ಯೆಗೆ ಯತ್ನಿಸಲಾಗಿತ್ತು. ಬೈಕಿನಲ್ಲಿ ತೆರಳುತ್ತಿದ್ದಾಗ ನಾಗೇಂದ್ರಪ್ಪನಿಗೆ ಗೂಡ್ಸ್ ವಾಹದಿಂದ ಡಿಕ್ಕಿ ಹೊಡೆಸಲಾಗಿತ್ತು. ಘಟನೆಯಲ್ಲಿ ನಾಗೇಂದ್ರಪ್ಪನ ತಲೆಗೆ ಪೆಟ್ಟಾಗಿತ್ತು. ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದರು.

Police Search at Shikaripura

ವಿಷ ಬೆರೆಸಿದ ನೀರು ಕೊಟ್ಟು ಉಸಿರುಗಟ್ಟಿಸಿದರು

ನ.29ರಂದು ನಾಗೇಂದ್ರಪ್ಪ ಭದ್ರಾವತಿ ನ್ಯಾಯಾಲಯಕ್ಕೆ ಹೋಗಿ ಊರಿಗೆ ಹಿಂತಿರುಗುತ್ತಿದ್ದರು. ಆಗ ಶಿಕಾರಿಪುರದಲ್ಲಿ ರಿಜ್ವಾನ್, ಹಬೀಬುಲ್ಲಾ, ಸುಹೈಲ್ ನಾಗೇಂದ್ರಪ್ಪನನ್ನು ಭೇಟಿಯಾಗಿದ್ದಾರೆ. ಲಾರಿಯೊಂದಕ್ಕೆ ಅವರನ್ನು ಹತ್ತಿಸಿಕೊಂಡು ಪುನೇದಹಳ್ಳಿ ಬಳಿ ಕರೆದೊಯ್ದು ಬಲವಂತಾಗಿ ವಿಷ ಬೆರೆಸಿದ ನೀರು ಕುಡಿಸಿದ್ದಾರೆ. ವಾಹನದಲ್ಲಿದ್ದ ದಿಂಬಿನಿಂದ ಉಸಿರುಗಟ್ಟಿಸಿ ಹತ್ಯೆ ಮಾಡಿದ್ದಾರೆ. ಅದೇ ವಾಹನದಲ್ಲಿ ಮೃತದೇಹವನ್ನ ಕೊಂಡೊಯ್ದು ರಸ್ತೆ ಪಕ್ಕದಲ್ಲಿ ನಿರ್ಮಾಣ ಹಂತದ ಕಾಲುವೆಗೆ ಬಿಸಾಡಿ ಹೋಗಿದ್ದರು.

ವಿಚಾರಣೆ ವೇಳೆ ಬಾಯಿಬಿಟ್ಟರು

ನಾಗೇಂದ್ರಪ್ಪನ ಅನುಮಾನಾಸ್ಪದ ಸಾವಿನ ಕುರಿತು ಶಿರಾಳಕೊಪ್ಪ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದರು. ವಿಚಾರಣೆ ಸಲುವಾಗಿ ನಾಗೇಂದ್ರಪ್ಪನ ಮಗ ಮಂಜುನಾಥನನ್ನು ಶಿಕಾರಿಪುರ ನಗರ ಠಾಣೆಗೆ ಕರೆಯಿಸಲಾಗಿತ್ತು. ಈ ವೇಳೆ ಮಂಜುನಾಥ ಸುಪಾರಿ ವಿಚಾರವನ್ನು ಬಾಯಿ ಬಿಟ್ಟಿದ್ದಾನೆ.

Shiralakoppa Police Arrest Murderers

ಈಗ ಭೋಗಿ ಗ್ರಾಮದ ಮಂಜುನಾಥ (42), ಆತನ ತಮ್ಮ ಬೆಂಗಳೂರು ಕೆ.ಎಸ್.ಆರ್.ಪಿ 4ನೇ ಬೆಟಾಲಿಯನ್ ಹೆಡ್ ಕಾನ್ಸ್ ಟೇಬಲ್ ಉಮೇಶ (40), ಭೋಗಿ ಗ್ರಾಮದ ಆಟೋ ಚಾಲಕ ರಿಜ್ವಾನ್ ಅಹ್ಮದ್ (24), ಶಿಕಾರಿಪುರದ ಹಬೀಬ್ ಉಲ್ಲಾ (28), ಸುಹೇಲ್ ಬಾಷಾ ಅಲಿಯಾಸ್ ಸುನಿ (30) ಎಂಬುವವರನ್ನು ಬಂಧಿಸಲಾಗಿದೆ. ಕೃತ್ಯಕ್ಕೆ ಬಳಸಿದ ಎರಡು ಲಾರಿಗಳು ಮತ್ತು ಇತರೆ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Shimoga Nanjappa Hospital

ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್, ಎ.ಎಸ್.ಪಿ ವಿಕ್ರಂ ಅಮಟೆ ಅವರ ಮಾರ್ಗದರ್ಶನದಲ್ಲಿ ಶಿಕಾರಿಪುರ ಡಿ.ವೈ.ಎಸ್.ಪಿ ಶಿವಾನಂದ ಎನ್.ಮದರಖಂಡಿ, ಶಿಕಾರಿಪುರ ವೃತ್ತ ಸಿಪಿಐ ಜೆ.ಲಕ್ಷ್ಮಣ್, ಶಿರಾಳಕೊಪ್ಪ ಠಾಣೆ ಪಿಎಸ್ಐ ಮಂಜುನಾಥ ಎನ್.ಕುರಿ ನೇತೃತ್ವದಲ್ಲಿ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ.

ಇದನ್ನೂ ಓದಿ – ತಾಳಗುಪ್ಪ – ಮೈಸೂರು ರೈಲು ಹತ್ತುವಾಗ ಜಾರಿ ಕೆಳಗೆ ಬಿದ್ದ ಪ್ರಯಾಣಿಕ, ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ

ಎಎಸ್ಐ ಮಲ್ಲೇಶಪ್ಪ, ಸಿಬ್ಬಂದಿ ಶಿವಕುಮಾರ್.ಬಿ, ಮಹಾಂತೇಶ ಎಂ.ಎಂ, ಸಂತೋಷ್, ಶಿಕಾರಿಪುರ ನಗರ ಠಾಣೆಯ ಅಶೋಕ್.ಪಿ, ಶಿಕಾರಿಪುರ ಉಪ ವಿಭಾಗದ ಮಾರುತಿ.ಬಿ, ಸಲ್ಮಾನ್ ಖಾನ್ ಹಾಜಿ, ಕಾರ್ತಿಕ್, ಶಿಕಾರಿಪುರ ಗ್ರಾಮಾಂತರ ಠಾಣೆಯ ಹಜರತ್ ಅಲಿ, ಪ್ರಶಾಂತ್, ಶಿವಮೊಗ್ಗ ಎ.ಎನ್.ಸಿ ಘಟಕದ ಗುರುರಾಜ್.ಜಿ, ಇಂದ್ರೇಶ್ ಜಿ, ವಿಜಯಕುಮಾರ್ ತನಿಖೆಯಲ್ಲಿ ಪಾಲ್ಗೊಂಡಿದ್ದರು.

CLICK & JOIN – SHIVAMOGGA LIVE COMMUNITY CLICK & JOIN – SHIVAMOGGA LIVE COMMUNITY

Shimoga Nanjappa Hospital

ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್‌ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.

» ಶಿವಮೊಗ್ಗ ಲೈವ್‌ gmail

[email protected]

» Whatsapp Number

7411700200

 

 

Byನಿತಿನ್‌ ಕೈದೊಟ್ಲು
Editor
Follow:
ಲೋಕಲ್ ಸುದ್ದಿಗಳು ಲೋಕಕ್ಕೆ ತಿಳಿಸಬೇಕು ಅಂತಾ ನ್ಯೂಸ್ ಚಾನೆಲ್ ದುನಿಯಾದಿಂದ ಹೊರ ಬಂದು ಶಿವಮೊಗ್ಗ ಲೈವ್ ಕಟ್ಟಿದ್ದೇವೆ. ಸ್ಥಳೀಯ ಪತ್ರಿಕೆ, ಕೇಬಲ್ ಚಾನೆಲ್, ರಾಜ್ಯಮಟ್ಟದ ಪತ್ರಿಕೆ, ನ್ಯೂಸ್ ಚಾನೆಲ್’ಗಳ ಬೆಂಗಳೂರು ಕಚೇರಿಯಲ್ಲಿ ವರ್ಷಗಟ್ಟಲೆ ಕೆಲಸ ಮಾಡಿದ್ದೇನೆ. ಈ ಫೀಲ್ಡಲ್ಲಿ ಹತ್ತು ವರ್ಷಕ್ಕೂ ಹೆಚ್ಚು ಕಾಲದ ಅನುಭವವಿದೆ. ಹಾಗಾಗಿ ಪೇಪರ್, ಟಿವಿಗಳಿಗಿಂತಲೂ ವಿಭಿನ್ನವಾಗಿ ಸುದ್ದಿ ಕೊಡಬೇಕು ಅನ್ನುವ ಹಂಬಲ. ಅದರ ಪ್ರಯತ್ನ ನಿರಂತರವಾಗಿದೆ. ಕ್ವಾಲಿಟಿ ಮತ್ತು ನಿಖರತೆಗೆ ಮೊದಲ ಆದ್ಯತೆ. ಸುದ್ದಿಯ ಒಳಗೆ ನನ್ನ ಅಭಿಪ್ರಾಯ ಹೇರುವುದಕ್ಕೆ ಇಷ್ಟವಿಲ್ಲ. ಸುದ್ದಿಯನ್ನು ಸುದ್ದಿಯಾಗಷ್ಟೆ ಕೊಡಬೇಕು ಎಂಬುದು ನನ್ನ ವಾದ. ಹೀಗಿದ್ದೂ ಕೆಲವೊಮ್ಮೆ ಸುದ್ದಿ ಕೆಳಗೆ ‘ಡ್ಯಾಷ್ ಡ್ಯಾಷ್ ಡ್ಯಾಷ್’ ಅಂತೆಲ್ಲ ಕಮೆಂಟುಗಳು ಬರುತ್ತವೆ. ಆರಂಭದಲ್ಲಿದ್ದ ಟೆಂಪರ್ ಈಗಿಲ್ಲ. ಹಾಗಾಗಿ ರಿಯಾಕ್ಟ್ ಮಾಡಲ್ಲ..! ನಿಮ್ಮೂರ ಸುದ್ದಿಗಳಿದ್ದರೆ ತಿಳಿಸಿ. ಹಣ ಪಡೆದು ಸುದ್ದಿ ಮಾಡುವ ಹವ್ಯಾಸ, ಅಭ್ಯಾಸ ಎರಡೂ ಇಲ್ಲ. ಇನ್ನಷ್ಟು ವಿಭಿನ್ನ ಪ್ರಯತ್ನಗಳು, ನಮ್ಮೂರನ್ನು ಮತ್ತಷ್ಟು ಸುತ್ತಬೇಕು, ನಮ್ಮೂರ ಬಗ್ಗೆ ತಿಳಿದು ಜನರಿಗೆಲ್ಲ ತಿಳಿಸಬೇಕು ಅನ್ನುವ ತವಕವಿದೆ. ಅಂದಹಾಗೆ, ಹೊಸ ಐಡಿಯಾಗಳಿದ್ದರೆ, ಸಲಹೆಗಳಿದ್ದರೆ ತಿಳಿಸಿ.. ‘ಡ್ಯಾಷ್ ಡ್ಯಾಷ್’ ಬಯ್ಯೋದಿದ್ದರೆ ದಯವಿಟ್ಟು ವಾಟ್ಸಪ್’ನಲ್ಲಿ ಮೆಸೇಜು ಮಾಡಿ, ಸಾಕು..! ನನ್ನ ಮೊಬೈಲ್ ನಂಬರ್ 9964634494. ಸಿಕ್ಕಾಗ ತಪ್ಪದೆ ಮಾತಾಡಿಸಿ. ನಿಮ್ಮ ಸ್ನೇಹ ನಂಗೆ ಅಮೂಲ್ಯ. ಶಿವಮೊಗ್ಗದ ಸುದ್ದಿಗಾಗಿ ನಿರಂತರವಾಗಿ ಶಿವಮೊಗ್ಗ ಲೈವ್.ಕಾಂ ಓದುತ್ತಿರಿ
Previous Article -BA-Ramesh-Hegde-on-Adike-Rate-Down ಅಡಕೆ ರೇಟ್ ಕುಸಿಯಲು 3 ಕಾರಣ ಪಟ್ಟಿ ಮಾಡಿದ ಕಾಂಗ್ರೆಸ್, ಏನದು ಕಾರಣ?
Next Article Areca Price in Shimoga APMC ಅಡಕೆ ರೇಟ್ | 12 ಡಿಸೆಂಬರ್ 2022 | ಎಲ್ಲೆಲ್ಲಿ ಯಾವ್ಯಾವ ಅಡಕೆಗೆ ಎಷ್ಟಿದೆ ಧಾರಣೆ?

ಇದನ್ನೂ ಓದಿ

Shikaripura-Town-Police-Station
SHIKARIPURA

ಚಿಮುಟದಿಂದ ಚುಚ್ಚಿ ಹೆಂಡತಿಯ ಕೊಲೆ ಮಾಡಿದ ಗಂಡ

ನಿತಿನ್‌ ಕೈದೊಟ್ಲು
ನಿತಿನ್‌ ಕೈದೊಟ್ಲು
12/06/2025
Online-Fraud-Case-image
CRIME DIARYSHIVAMOGGA CITY

ವಾಟ್ಸಪ್‌ ಗ್ರೂಪ್‌ ಅಡ್ಮಿನ್‌ಗೆ ಮೆಸೇಜ್‌ ಮಾಡಿದ್ದ ಟೀಚರ್‌ಗೆ ಕಾದಿತ್ತು ಆಘಾತ, ಠಾಣೆಗೆ ದೌಡು, ಆಗಿದ್ದೇನು?

ನಿತಿನ್‌ ಕೈದೊಟ್ಲು
ನಿತಿನ್‌ ಕೈದೊಟ್ಲು
11/06/2025
crime name image
CRIME DIARYSHIVAMOGGA CITY

ಸೋಮಿನಕೊಪ್ಪ ಫ್ಲೈ ಓವರ್‌ ಕೆಳಗೆ ಸಾಫ್ಟ್‌ವೇರ್‌ ಇಂಜಿನಿಯರ್‌ಗೆ ಮೇಲೆ ಅಟ್ಯಾಕ್‌, ಆಗಿದ್ದೇನು?

ನಿತಿನ್‌ ಕೈದೊಟ್ಲು
ನಿತಿನ್‌ ಕೈದೊಟ್ಲು
10/06/2025
Crime-News-General-Image
CRIME DIARYSHIVAMOGGA CITY

ಸಾಲದ ಕಂತು ಕಟ್ಟದ ಗ್ರಾಹಕನನ್ನು ಸಂಪರ್ಕಿಸಿದ ಬಜಾಜ್‌ ಫೈನಾನ್ಸ್‌ ಸಿಬ್ಬಂದಿಗೆ ಕಾದಿತ್ತು ಶಾಕ್‌, ದಾಖಲಾಯ್ತು ಕೇಸ್‌

ನಿತಿನ್‌ ಕೈದೊಟ್ಲು
ನಿತಿನ್‌ ಕೈದೊಟ್ಲು
09/06/2025
crime name image
CRIME DIARYSHIVAMOGGA CITY

ಅಡಿಕೆ ಹಾಳೆ ವಿಚಾರವಾಗಿ ಮನೆಗೆ ನುಗ್ಗಿ ಗಲಾಟೆ, ಶಿವಮೊಗ್ಗದಲ್ಲಿ ದಾಖಲಾಯ್ತು ಕೇಸ್‌

ನಿತಿನ್‌ ಕೈದೊಟ್ಲು
ನಿತಿನ್‌ ಕೈದೊಟ್ಲು
08/06/2025
Police-Van-Jeep-at-Shimoga-Nehru-Road
CRIME DIARYSHIVAMOGGA

ಶಿವಮೊಗ್ಗದ ನಿರ್ಜನ ಪ್ರದೇಶದಲ್ಲಿ ಬೆಂಗಳೂರಿನ ವ್ಯಕ್ತಿಗೆ ಚಿನ್ನದ ನಾಣ್ಯ ಕೊಟ್ಟ ಸ್ನೇಹಿತ, ಆಮೇಲೆ ಕಾದಿತ್ತು ಆಘಾತ

ನಿತಿನ್‌ ಕೈದೊಟ್ಲು
ನಿತಿನ್‌ ಕೈದೊಟ್ಲು
08/06/2025
Previous Next
Shivamogga-Live-Logo-New-Logo
Welcome Back!

Sign in to your account

Username or Email Address
Password

Lost your password?