ಗಲಾಟೆ ತಡೆಗೆ ಹೋದ ಪೊಲೀಸರನ್ನೇ ಎಳೆದಾಡಿ, ERSS ಕಾರಿನ ಗಾಜಿಗೆ ಕಲ್ಲು ತೂರಾಟ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗದ ಲೈವ್.ಕಾಂ | SHIMOGA NEWS | 1 ಫೆಬ್ರವರಿ 2022

ಗಲಾಟೆ ತಡೆಯಲು ಹೋದ ಪೊಲೀಸರನ್ನೇ ಎಳೆದಾಡಿ, ಪೊಲೀಸ್ ವಾಹನದ ಮೇಲೆ ಕಲ್ಲು ತೂರಲಾಗಿದೆ. ಘಟನೆಯಲ್ಲಿ ಪೊಲೀಸ್ ವಾಹನದ ಹಿಂಬದಿ ಗಾಜು ಪುಡಿಯಾಗಿದೆ.

NANJAPPA HOSPITAL CANCER DIVISION

ಶಿವಮೊಗ್ಗದ ಬೊಮ್ಮನಕಟ್ಟೆಯ ಎ ಬ್ಲಾಕ್’ನ ಮರಿಯಮ್ಮ ದೇವಸ್ಥಾನದ ಬಳಿ ಘಟನೆ ಸಂಭವಿಸಿದೆ. ರಾತ್ರಿ ಗಲಾಟೆಯಾಗುತ್ತಿರುವ ಕುರಿತು ಮಾಹಿತಿ ಲಭ್ಯವಾದ ಹಿನ್ನೆಲೆ, ಪೊಲೀಸರು ಸ್ಥಳಕ್ಕೆ ತೆರಳಿದ್ದರು.

ವಾಹನದ ಮೇಲೆ ಕಲ್ಲು ತೂರಿದ್ದೇಕೆ?

ಬೊಮ್ಮನಕಟ್ಟೆ ಬಳಿ ಯುವಕರ ಗುಂಪುಗಳ ಮಧ್ಯೆ ಗಲಾಟೆಯಾಗುತ್ತಿದೆ ಎಂದು ಮಾಹಿತಿ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳಕ್ಕೆ ತೆರಳಿದ್ದರು. ಪೊಲೀಸ್ ಬರುತ್ತಿರುವುದನ್ನು ಗಮನಿಸಿದ ಕೆಲವರು ಸ್ಥಳದಿಂದ ಓಡಿ ಹೋಗಿದ್ದಾರೆ.

ಗಲಾಟೆ ಮಾಡುತ್ತಿದ್ದ ಯುವಕರನ್ನು ವಿಚಾರಿಸಲು ತೆರಳಿದ ಪೊಲೀಸ್ ಸಿಬ್ಬಂದಿ ಶಿವರಾಮ್, ಚಾಲಕ ಮನು ಅವರನ್ನು ಯುವಕರು ಎಳೆದಾಡಿದ್ದಾರೆ. ಅಲ್ಲದೆ ಪೊಲೀಸ್ ವಾಹನದ ಹಿಂಬದಿಗೆ ಕಲ್ಲು ತೂರಿದ್ದಾರೆ. ಘಟನೆಯಲ್ಲಿ ಪೊಲೀಸ್ ವಾಹನದ ಹಿಂಬದಿ ಗಾಜು ಪುಡಿಯಾಗಿದೆ.

vinobanagara police station

ಹೆಚ್ಚುವರಿ ಪೊಲೀಸರು ದೌಡು

ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ವಿಚಾರ ತಿಳಿಯುತ್ತಿದ್ದಂತೆ ಹೆಚ್ಚುವರಿ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಈ ವೇಳೆ ಕೆಲವು ಯುವಕರು ಸ್ಥಳದಿಂದ ಓಡಿ ಹೋಗಿದ್ದಾರೆ. ಒಂಭತ್ತು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಅಕ್ಬರ್, ವಿನೋದ, ಸದ್ದಾಂ, ಪುನೀತ, ವಿನೋದ, ಅರುಣ, ಸಂತೋಷ್, ಯೋಗೀಶ, ಪ್ರಮೋದ ಬಂಧಿತರು. ಅಕ್ಮಲ್, ರಫೀಕ್, ರಘು, ದೇವರಾಜ, ಅಶು, ವಾಸು, ಮುನಿಯಪ್ಪ, ಹಫೀಜ್, ರಾಜೇಶ, ರಕ್ಷಿತ್, ಅಲನ್, ನಯಾಜ್, ಪ್ರವೀಣ್, ಇಮ್ತಿಯಾಜ್ ಎಂಬುವವರು ಪರಾರಿಯಾಗಿದ್ದರು.

ವಿನೋಬನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಮುಂದುವರೆದಿದೆ.

shimoga, policeAbout Shivamogga Live

about smg live readers

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment