SHIVAMOGGA LIVE NEWS | 13 DECEMBER 2022
ಶಿವಮೊಗ್ಗ : ದೇವಸ್ಥಾನದ (kudli temple) ಬಾಗಿಲಿನ ಬೀಗ ಒಡೆದು ದೇವರ ಆಭರಣಗಳನ್ನು ಕಳ್ಳತನ ಮಾಡಲಾಗಿದೆ. ಕೂಡ್ಲಿಯ ಗ್ರಾಮದ ಶ್ರೀ ಚಿಂತಾಮಣಿ ನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಘಟನೆ ಸಂಭವಿಸಿದೆ.
ದೇವರ (kudli temple) ಬೆಳ್ಳಿ ಕಿರೀಟ, ಬೆಳ್ಳಿ ಕಿವಿ, ಬೆಳ್ಳಿ ಕಣ್ಣು, ಬೆಳ್ಳಿ ಮೂಗು, ಬೆಳ್ಳಿ ನಾಲಗೆ, ಬೆಳ್ಳಿ ಮೀಸೆ, ಶಂಕಚಕ್ರ, ಬೆಳ್ಳಿ ಸೇವಂತಿಗೆ ಸರ, ಬೆಳ್ಳಿಯ ಎರಡು ಕಾಲು ದೀಪ, ಬೆಳ್ಳಿ ಸಾಲಿಗ್ರಾಮ, ಬೆಳ್ಳಿಯ ತುಳಸಿ ಸರ ಸೇರಿ 2 ಕೆ.ಜಿ 75 ಗ್ರಾಂ ತೂಕದ ಬೆಳ್ಳಿ ಆಭರಣ ಕಳ್ಳತನವಾಗಿದೆ. 5 ಕೆ.ಜಿ. ಹಿತ್ತಾಳೆ ಪಾತ್ರೆ ಮತ್ತು ಇತರೆ ವಸ್ತುಗಳು ಕಳುವಾಗಿದೆ. ಇವುಗಳಿಗೆ 1.06 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.
ಇದನ್ನೂ ಓದಿ – ಭದ್ರಾವತಿ – ಶಿವಮೊಗ್ಗ ನಡುವೆ ಕೈಕೊಟ್ಟ ಇಂಟರ್ ಸಿಟಿ ರೈಲು ಇಂಜಿನ್
ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200