SHIVAMOGGA LIVE NEWS | 30 OCTOBER 2023
SHIMOGA : ಬಸ್ ನಿಲ್ದಾಣದಲ್ಲಿ ಜನ ದಟ್ಟಣೆ ಹೆಚ್ಚಿದ್ದಾಗ ಮಹಿಳೆಯ ಬ್ಯಾಗ್ನಿಂದ ಚಿನ್ನಾಭರಣ ಕಳ್ಳತನ (Theft) ಮಾಡಿದ್ದ ಕುಖ್ಯಾತ ಕಳ್ಳಿಯನ್ನು ದೊಡ್ಡಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ನಗರದ ಮಂಜುನಾಥ ಬಡಾವಣೆ ಮುಖ್ಯರಸ್ತೆ ನಿವಾಸಿ ತಾಹೀರಾ ರೋಹಿ (30) ಬಂಧಿತಳು.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ. ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200
ಘಟನೆ ಹಿನ್ನೆಲೆ ಏನು?
ಭದ್ರಾವತಿಯ ಪ್ರಭು ಎಂಬುವವರನ್ನು ತಮ್ಮ ಪತ್ನಿ ಮತ್ತು ಮಕ್ಕಳನ್ನು ದಾವಣಗೆರೆಯಲ್ಲಿರುವ ಸಂಬಂಧಿಯ ಮನೆಗೆ ಕಳುಹಿಸಲು ಶಿವಮೊಗ್ಗದಲ್ಲಿ ಕೆಎಸ್ಆರ್ಟಿಸಿ ಬಸ್ ಹತ್ತಿಸಿದ್ದರು. ಬಸ್ ನ್ಯೂ ಮಂಡ್ಲಿಗೆ ತಲುಪಿದ ಸಂದರ್ಭ ಪ್ರಭು ಅವರಿಗೆ ಪತ್ನಿ ಕರೆ ಮಾಡಿದ್ದರು. ವ್ಯಾನಿಟಿ ಬ್ಯಾಗ್ನಲ್ಲಿದ್ದ ಚಿನ್ನಾಭರಣ ಕಳ್ಳತನವಾಗಿದ ಎಂದು ತಿಳಿಸಿದ್ದರು. ಈ ಸಂಬಂಧ ಪ್ರಭು ಅವರು ದೊಡ್ಡಪೇಟೆ ಠಾಣೆಯಲ್ಲಿ ದೂರು ನೀಡಿದ್ದರು.
ಇದನ್ನೂ ಓದಿ – ಹೆಂಡತಿ, ಮಕ್ಕಳನ್ನು ಬಸ್ ಹತ್ತಿಸಿ ಕಳುಹಿಸಿದ ಕೆಲವೇ ನಿಮಿಷಕ್ಕೆ ಬಂತು ಫೋನ್, ಪತಿಗೆ ಶಾಕ್, ಆಗಿದ್ದೇನು?
ಸಿಕ್ಕಿಬಿದ್ದಳು ಕುಖ್ಯಾತ ಕಳ್ಳಿ
ಘಟನೆ ಸಂಬಂಧ ತನಿಖೆಗೆ ದೊಡ್ಡಪೇಟೆ ಠಾಣೆ ಇನ್ಸ್ಪೆಕ್ಟರ್ ಅಂಜನ್ ಕುಮಾರ್ ಅವರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ಶ್ರೀನಿವಾಸ್, ಸಿಬ್ಬಂದಿ ಪಾಲಕ್ಷನಾಯ್ಕ್, ಲಚ್ಚಾನಾಯ್ಕ್, ಚಂದ್ರನಾಯ್ಕ್, ರಮೇಶ್, ನಿತಿನ್, ಸುಮಿತ್ರಾ ಬಾಯಿ ಅವರು ತನಿಖೆ ನಡೆಸಿದರು. ಆರೋಪಿ ತಾಹೀರಾ ರೋಹಿ ಎಂಬಾಕೆಯನ್ನು ಬಂಧಿಸಿದ್ದಾರೆ. ಈಕೆಯಿಂದ 22 ಗ್ರಾಂನ ಬಂಗಾರದ ನೆಕ್ಲೇಸ್, ಬಂಗಾರದ ಜುಮುಕಿ ವಶಕ್ಕೆ ಪಡೆದ್ದಾರೆ. ಇದರ ಮೌಲ್ಯ 1.29 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.
ಇದನ್ನೂ ಓದಿ – ಮೈಸೂರಿಗೆ ತೆರಳಿದ್ದ ಉಪನ್ಯಾಸಕಿಗೆ ಎದುರು ಮನೆಯವರಿಂದ ಬಂತು ಫೋನ್, ವಾಪಸಾದಾಗ ಕಾದಿತ್ತು ಶಾಕ್