SHIVAMOGGA LIVE NEWS | 28 APRIL 2024
BYKODU : ಸಮೀಪದ ಹುರುಳಿಯ ಮಹಾವೀರ ಜೈನ್ ಎಂಬುವರ ಮನೆಗೆ ಆಕಸ್ಮಿಕ ಬೆಂಕಿ ತಗುಲಿ ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಸುಟ್ಟು ಭಸ್ಮವಾಗಿದೆ. ಒಂದೇ ಮನೆಯಲ್ಲಿ ವಿಜಯ್ ಕುಮಾರ್ ಮತ್ತು ಮಹಾವೀರ ಅವರ ಕುಟುಂಬಗಳು ವಾಸವಾಗಿದ್ದವು.
ಎರಡು ಕುಟುಂಬದ ಸದಸ್ಯರು ಶನಿವಾರ ಬೇರಾಳದ ಚಂದ್ರನಾಥ ಬಸದಿಯಲ್ಲಿ ನಡೆಯುತ್ತಿರುವ ಪಂಚ ಕಲ್ಯಾಣ ಮಹೋತ್ಸವಕ್ಕೆ ತೆರಳಿದ್ದಾಗ ಈ ಅವಘಡ ಸಂಭವಿಸಿದೆ. ಹೊಗೆ ಕಂಡ ನೆರೆಹೊರೆಯವರು ಮನೆ ಬಾಗಿಲು ಒಡೆದು ಸಮಾರೋಪಾದಿಯಲ್ಲಿ ಬೆಂಕಿ ನಂದಿಸಿದ್ದಾರೆ.
ಸುಮಾರು 50 ಲಕ್ಷ ರೂ. ನಷ್ಟ
ಘಟನೆಯಿಂದಾಗಿ ಮನೆಯಲ್ಲಿ ಸಂಗ್ರಹಿಸಿರುವ ಸಿಪ್ಪೆ ಗೋಟು, ಕೆಂಪಡಕೆ, ಕಾಳುಮೆಣಸು, ಲವಂಗ, ಜಾಯಿಕಾಯಿ ಹಾಗೂ ಬೆಲೆಬಾಳುವ ಪೀಠೋಪಕರಣಗಳು, ದಾಸ್ತಾನುಗೊಳಿಸಿದ ಆಹಾರ ಸಾಮಗ್ರಿಗಳು, ಬಟ್ಟೆ ವಸ್ತು ಒಡವೆಗಳು ಸುಟ್ಟು ಕರಕಲಾಗಿದ್ದು, ಅಂದಾಜು 50 ಲಕ್ಷ ರೂ. ನಷ್ಟ ಸಂಭವಿಸಿದೆ ಎಂದು ಕುಟುಂಬದ ಮುಖ್ಯಸ್ಥ ಮಹಾವೀರ ಜೈನ್ ಮತ್ತು ವಿಜಯ್ ಕುಮಾರ್ ಜೈನ್ ತಿಳಿಸಿದ್ದಾರೆ.
ಸುಮಾರು 200 ವರ್ಷಗಳ ಮನೆ ಸುಟ್ಟು ಕರಕಲಾಗಿರುವುದು ಕಂಡು ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದರು. ಕಾರ್ಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಿನ್ನೀರಿಗೆ ಜಾರಿದ ಟ್ಯಾಂಕರ್
TUMARI : ಪೆಟ್ರೋಲ್ ಟ್ಯಾಂಕರ್ ಲಾರಿಯೊಂದು ಶನಿವಾರ ಶರಾವತಿ ಹಿನ್ನೀರಿಗೆ ಜಾರಿತ್ತು. ಚಾಲಕನ ಸಮಯ ಪ್ರಜ್ಞೆಯಿಂದ ಅವಘಡ ತಪ್ಪಿದೆ. ಹೊಳೆಬಾಗಿಲಿನಲ್ಲಿ ಘಟನೆ ಸಂಭವಿಸಿದೆ. ಲಾಂಚ್ ನಿಲ್ಲಿಸುವ ರ್ಯಾಂಪ್ ಮೇಲಿಂದ ಟ್ಯಾಂಕರ್ ಲಾರಿ ಹಿನ್ನೀರಿಗೆ ಜಾರಿದೆ. ಸಿಗಂದೂರಿಗೆ ತೆರಳು ಲಾಂಚ್ಗಳು ಇದೇ ರ್ಯಾಂಪ್ಗಳನ್ನು ಬಳಸಿ ನಿಲ್ಲುತ್ತವೆ.
ಇದನ್ನೂ ಓದಿ – ಶಿವಮೊಗ್ಗಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಭೇಟಿಗೆ ದಿನಾಂಕ ನಿಗದಿ
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200