SHIVAMOGGA LIVE NEWS | 15 FEBRUARY 2023
SHIMOGA : ಸಾಗರದ ಮಾರಿಕಾಂಬ ದೇವಿ ಜಾತ್ರೆಗೆ ತೆರಳುತ್ತಿದ್ದ ಯುವಕನ ಕಾರು ಅಡ್ಡಗಟ್ಟಿ ಹೆದ್ದಾರಿಯಲ್ಲಿ ದರೋಡೆ (Dacoity) ಮಾಡಲಾಗಿದೆ. ಕುತ್ತಿಗೆ ಬಳಿ ಮಚ್ಚು ಇಟ್ಟು ನಗದು ಮತ್ತು ಚಿನ್ನದ ಸರ ಕಸಿದುಕೊಂಡು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.
ತರೀಕೆರೆಯ ವಸಂತ ಎಂಬುವವರು ಕಾರಿನಲ್ಲಿ ತೆರಳುತ್ತಿದ್ದಾಗ ಮಂಗಳವಾರ ಮಧ್ಯಾಹ್ನ ಘಟನೆ ಸಂಭವಿಸಿದೆ. ಶಿವಮೊಗ್ಗ ಸಾಗರ ಹೆದ್ದಾರಿಯ ಟ್ರೀ ಪಾರ್ಕ್ ಬಳಿ ಕಾರು ಅಡ್ಡಗಟ್ಟಲಾಗಿದೆ (Dacoity) ಎಂದು ಆರೋಪಿಸಲಾಗಿದೆ.
ಹೇಗಾಯ್ತು ಘಟನೆ?
ವಸಂತ ಅವರು ಕಾರಿನಲ್ಲಿ ಸಾಗರದ ಮಾರಿಕಾಂಬ ದೇವಿ ಜಾತ್ರೆಗೆ ತೆರಳುತ್ತಿದ್ದರು. ಟ್ರೀ ಪಾರ್ಕ್ ಬಳಿ ಮೂತ್ರ ವಿಸರ್ಜನೆಗೆಂದು ರಸ್ತೆ ಬದಿ ಕಾರು ನಿಲ್ಲಿಸಿದ್ದರು. ಬಳಿಕ ಕಾರು ಹತ್ತಲು ಬಂದಿದ್ದಾರೆ. ಈ ವೇಳೆ ಇಬ್ಬರು ಯುವಕರು ಕಾರಿಗೆ ಅಡ್ಡಲಾಗಿ ತಮ್ಮ ಹೋಂಡಾ ಡಿಯೋ ಬೈಕ್ ತಂದು ನಿಲ್ಲಿಸಿದ್ದಾರೆ.
ಇದನ್ನೂ ಓದಿ – ಪಾಳು ಮನೆ ಮುಂದೆ ಅಸ್ವಸ್ಥಳಾಗಿ ಬಿದ್ದಿದ್ದ ಅಪರಿಚಿತ ಮಹಿಳೆ ಆಸ್ಪತ್ರೆಯಲ್ಲಿ ಸಾವು, ಕೈ ಮೇಲಿದೆ ‘ಪಾಪಿ ಪ್ರೀತಿ ಕಾವ್ಯ’ ಹಚ್ಚೆ
ಒಬ್ಬ ಯುವಕ ವಸಂತ ಅವರ ಕುತ್ತಿಗೆ ಬಳಿ ಮಚ್ಚು ಇಟ್ಟು ಅವಾಚ್ಯವಾಗಿ ಬೈದಿದ್ದಾರೆ. ವಸಂತ ಬಳಿ ಇದ್ದ 5 ಸಾವಿರ ನಗದು, ಕೊರಳಲ್ಲಿದ್ದ ಚೈನ್ ಕಸಿದುಕೊಂಡಿದ್ದಾರೆ. ಹೋಂಡಾ ಡಿಯೋ ಬೈಕಿನಲ್ಲಿ ಸಾಗರದ ಕಡೆಗೆ ತೆರಳಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದಾರೆ.
ಇದನ್ನೂ ಓದಿ – ಶಿವಮೊಗ್ಗದ ಆಟೋಗಳಿಗೆ ಪೊಲೀಸರಿಂದ 3 ಸೂಚನೆ, ಡಿಸ್ ಪ್ಲೇ ಕಾರ್ಡ್ ವಿತರಣೆ, ಏನಿದು? ಕಾರ್ಡಿನಲ್ಲಿ ಏನೇನಿದೆ?
ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.