SHIVAMOGGA LIVE NEWS | 3 DECEMBER 2022
ಶಿವಮೊಗ್ಗ : ರಾತ್ರಿ ವೇಳೆ ಸಾರ್ವಜನಿಕರನ್ನು ಅಡ್ಡಗಟ್ಟಿ ದರೋಡೆ (dacoity attempt) ಮಾಡಲು ಹೊಂಚು ಹಾಕಿದ್ದವರ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಆರೋಪಿಗಳನ್ನು ಬಂಧಿಸಿ, ಮಾರಕಾಸ್ತ್ರಗಳನ್ನು ವಶಕ್ಕೆ ಪಡೆದಿದ್ದಾರೆ.
(dacoity attempt)
ಶಿವಮೊಗ್ಗದ ವಿದ್ಯಾನಗರ – ಮತ್ತೂರು ರಸ್ತೆಯಲ್ಲಿ ರಾತ್ರಿ ವೇಳೆ ಸಾರ್ವಜನಿಕರನ್ನು ಅಡ್ಡಗಟ್ಟಿ ದರೋಡೆಗೆ ಹೊಂಚು ಹಾಕಲಾಗುತ್ತಿದೆ ಎಂದು ಪೊಲೀಸರಿಗೆ ಮಾಹಿತಿ ಲಭಿಸಿತ್ತು. ಅದರಂತೆ ದಾಳಿ ನಡೆಸಿದಾಗ ವಿದ್ಯಾನಗರದ ತೊಟ್ಟಿ ಸೀನ ಮತ್ತು ಆತನ ಗ್ಯಾಂಗ್ ಪೊಲೀಸರ ಬಲೆಗೆ ಬಿದ್ದಿದೆ.
ALSO READ – ಅರ್ಧ ಶಿವಮೊಗ್ಗ ಸಿಟಿ, ತಾಲೂಕಿನ ಹಲವು ಗ್ರಾಮಗಳಲ್ಲಿ ಭಾನುವಾರ ಇಡೀ ದಿನ ಕರೆಂಟ್ ಇರಲ್ಲ
ತೊಟ್ಟಿ ಸೀನ, ಸುಭಾಷ್ ನಗರದ ಸುದೀಪ್ ಮತ್ತು ಮಲವಗೊಪ್ಪದ ಯತೀಶ್ ಎಂಬುವವರು ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಇವರಿಂದ ಮಾರಕಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ. ಇನ್ನಿಬ್ಬರು ಪರಾರಿಯಾಗಿದ್ದು ಅವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದ್ದೆ.