ಶಿವಮೊಗ್ಗ ಲೈವ್.ಕಾಂ | SHIMOGA NEWS | 30 ಸೆಪ್ಟೆಂಬರ್ 2021
ಈ ಭಾರಿ ಶಿವಮೊಗ್ಗದಲ್ಲಿ ಭಕ್ತಿಪೂರ್ವಕ, ಸರಳ ಮತ್ತು ವೈಭವದ ದಸರಾ ಆಚರಣೆ ಮಾಡಲಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಈಶ್ವರಪ್ಪ, ಕಳೆದ ಭಾರಿಯಂತೆಯೇ ಈ ಭಾರಿಯು ದಸರಾ ಅಚರಣೆ ಮಾಡಲಿದ್ದೇವೆ ಎಂದರು.
ಹೇಗಿರುತ್ತೆ ಈ ಭಾರಿಯ ದಸರಾ?
ಸಾಂಸ್ಕೃತಿಕ ಕಾರ್ಯಕ್ರಮಗಳು ಒಂಭತ್ತು ದಿನ ನಡೆಯಲಿದೆ. ಈವರೆಗೂ ಒಂಭತ್ತು ಕಡೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದವು. ಆದರೆ ಈ ಭಾರಿ ಎಲ್ಲಾ ಕಾರ್ಯಗಳು ಫ್ರೀಡಂ ಪಾರ್ಕ್ನಲ್ಲೇ ನಡೆಯಲಿದೆ.
ಮೆರವಣಿಗೆ ಸರಳವಾಗಿ, ವ್ಯವಸ್ಥಿತವಾಗಿ ನಡೆಯಲಿದೆ. ಕೆಲವೇ ಕೆಲವು ದೇಗುಲಗಳು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿವೆ.
ನಗರದ 194 ದೇಗುಲಗಳಿಗೆ ಪೂಜೆ ಸಲ್ಲಿಸಲು ನಾಲ್ಕು ಸಾವಿರ ರೂ. ನೀಡಲಾಗುತ್ತದೆ. ಆದರೆ ಎಲ್ಲಾ ದೇವರುಗಳು ಮೆರವಣಿಗೆಗೆ ಬರುವ ಅವಶ್ಯಕತೆ ಇಲ್ಲ.
ಅಂಬು ಕಡಿಯುವುದು ಅಥವಾ ಬನ್ನಿ ಮುಡಿಯುವ ಕಾರ್ಯಕ್ರಮ ಫ್ರೀಡಂ ಪಾರ್ಕ್ನಲ್ಲಿ ನಡೆಯಲಿದೆ. ಜನ ಹೆಚ್ಚು ಸೇರಬಾರದು ಎಂಬ ಉದ್ದೇಶದಿಂದ ನಗರದ ಅಲ್ಲಲ್ಲಿ ಎಲ್ಇಡಿ ಸ್ಕ್ರೀನ್ ಅಳವಡಿಸಲಾಗುತ್ತದೆ. ಕೋವಿಡ್ ತಡೆಗೆ ಈ ಕ್ರಮ ಕೈಗೊಳಲ್ಳಾಗುತ್ತದೆ.
ಮೇಯರ್ ಸುನೀತಾ ಅಣ್ಣಪ್ಪ, ಉಪ ಮೇಯರ್ ಶಂಕರ್ ಗನ್ನಿ, ಜಿಲ್ಲಾ ಪಂಚಾಯತಿ ಸಿಇಒ ವೈಶಾಲಿ, ಪಾಲಿಕೆ ಕಮಿಷನರ್ ಚಿದಾನಂದ ವಟಾರೆ ಇದ್ದರು.