ಶಿವಮೊಗ್ಗ ಲೈವ್.ಕಾಂ | 1 ಜುಲೈ 2019
ತೀರ್ಥಹಳ್ಳಿ ತಾಲೂಕಿನ ಹಣಗೆರೆ ಕಟ್ಟೆಗೆ ಜಿಲ್ಲಾಧಿಕಾರಿ ಕೆ.ಎ.ದಯಾನಂದ್ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ, ಪ್ಲಾಸ್ಟಿಕ್ ಕವರ್ ಬಳಕೆ ಮಾಡುತ್ತಿದ್ದ ಅಂಗಡಿ ಮಾಲೀಕರಿಗೆ ಜಿಲ್ಲಾಧಿಕಾರಿ ಖಡಕ್ ವಾರ್ನಿಂಗ್ ನೀಡಿದರು.
ಅಂಗಡಿ ಬಂದ್ ಮಾಡಿಸಬೇಕಾಗುತ್ತೆ
ಹಣಗೆರೆಯ ಅಂಗಡಿಗಳಲ್ಲಿ ಪ್ಲಾಸ್ಟಿಕ್ ಕವರ್ ಬಳಕೆ ಮಾಡಲಾಗುತ್ತಿತ್ತು. ಇದನ್ನು ಗಮನಿಸಿದ ಜಿಲ್ಲಾಧಿಕಾರಿ ಕೆ.ಎ.ದಯಾನಂದ್, ಪ್ಲಾಸ್ಟಿಕ್ ಚೀಲದ ಬದಲು, ಮರುಬಳಕೆ ಕೈ ಚೀಲ ಬಳಸುವಂತೆ ಸೂಚಿಸಿದರು. ಪ್ರತಿ ಅಂಗಡಿಯವರು ಪ್ರತ್ಯೇಕ ಕಸದ ಬುಟ್ಟಿಯಲ್ಲಿ ಪ್ಲಾಸ್ಟಿಕ್ ಕಸವನ್ನು ಸಂಗ್ರಹಿಸಿ, ವಿಲೇವಾರಿ ಮಾಡಬೇಕು ಎಂದರು. ಈ ನಿಯಮ ಉಲ್ಲಂಘಿಸುವ ಅಂಗಡಿ ಮಾಲೀಕರಿಗೆ ನೊಟೀಸ್ ನೀಡಿ, ಜಪ್ತಿ ಮಾಡುವಂತೆ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿಗೆ ಸೂಚಿಸಿದರು.

ಇನ್ನು, ಪ್ಲಾಸ್ಟಿಕ್ ನಿಷಧದ ಜಾಗೃತಿ ಮೂಡಿಸಲು ಹೋಂ ಗಾರ್ಡ್ ನೇಮಿಸಬೇಕು. ಮೈಕ್ ಮೂಲಕ ಪ್ಲಾಸ್ಟಿಕ್ ನಿಷೇಧವಿರುವ ಬಗ್ಗೆ ಆಗಾಗ ಅನೌನ್ಸ್ ಮಾಡುವಂತೆ ತಿಳಿಸಿದರು.
ಅರಣ್ಯಕ್ಕೆ ಫನ್ಸಿಂಗ್ ಹಾಕಿ
ನಿಷೇಧಿತ ಅರಣ್ಯ ಪ್ರದೇಶಕ್ಕೆ ಅತಿಕ್ರಮ ಪ್ರವೇಶ ನಿರ್ಬಂಧಿಸಲು ಫೆನ್ಸಿಂಗ್ ಅಳವಡಿಸುವಂತೆ RFOಗೆ ಸೂಚಿಸಿದರು. ಗ್ರಾಮ ಠಾಣ ಜಾಗವನ್ನು ಅಳತೆ ಮಾಡಿ ಬೌಂಡರಿ ಗುರುತಿಸುವಂತೆ ಸೂಚಿಸಿದರು. ಮತ್ತೊಂದೆಡೆ ದೇವಸ್ಥಾನದ ಕಾಮಗಾರಿ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿ, ಬೇಗ ಕಾಮಗಾರಿ ಪೂರ್ಣಗೊಳಿಸಬೇಕು ಎಂದರು.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200
ಸುದ್ದಿಗಾಗಿ ಮೊಬೈಲ್ ನಂಬರ್ | 9964634494
ಈ ಮೇಲ್ | [email protected]