ಶಿವಮೊಗ್ಗ ಲೈವ್.ಕಾಂ | SHIMOGA NEWS | 3 MARCH 2021
ಸಚಿವ ರಮೇಶ್ ಜಾರಕಿಹೊಳಿ ಸಿಡಿ ವಿವಾದ ಸಂಬಂಧ ಉಪ ಮುಖ್ಯಮಂತ್ರಿ ಡಾ.ಅಶ್ವಥ ನಾರಾಯಣ್ ಅವರು ಶಿವಮೊಗ್ಗದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಕುಮಟಕ್ಕೆ ತೆರಳುವ ಮಾರ್ಗ ಮಧ್ಯೆ ಶಿವಮೊಗ್ಗ ಹೆಲಿಪ್ಯಾಡ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಸತ್ಯವೋ ಸುಳ್ಳೋ ಗೊತ್ತಿಲ್ಲ
ಸಿಡಿಯಲ್ಲಿ ಇರುವುದು ಸತ್ಯವೋ ಸುಳ್ಳೋ ಗೊತ್ತಿಲ್ಲ. ಅದರ ಬಗ್ಗೆ ತನಿಖೆ ಆಗಬೇಕಿದೆ. ಈ ವಿಚಾರದಲ್ಲಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಡಾ.ಅಶ್ವಥ ನಾರಾಯಣ ತಿಳಿಸಿದರು.
ಕುತಂತ್ರದಿಂದ ಬ್ಲಾಕ್ಮೇಲ್, ಹನಿಟ್ರಾಪ್
ಇದು ಒಳ್ಳೆಯ ಉದ್ದೇಶದಿಂದ ಮಾಡುವ ಸತ್ಕಾರ್ಯಗಳಲ್ಲ. ದುರುದ್ದೇಶದಿಂದ ಪಿತೂರಿ ಕುತಂತ್ರದಿಂದ ಬ್ಲಾಕ್ಮೇಲ್ ಹನಿಟ್ರ್ಯಾಪ್ ಮಾಡುವುದಿದೆ. ಹಾಗಾಗಿ ಇದು ಎಷ್ಟರ ಮಟ್ಟಿಗೆ ಒಳ್ಳೆಯ ವಿಚಾರ ಎನ್ನುವುದು ಕಷ್ಟವಾಗಿದೆ. ಎಷ್ಟರ ಮಟ್ಟಕ್ಕೆ ಸರಿ ಇದೆ ಎನ್ನುವುದನ್ನು ಕಾಲವೇ ತಿಳಿಸುತ್ತದೆ .ಯಾರಾದರೂ ಕುತಂತ್ರ ಮಾಡಿದ್ದಾರೋ ಅಥವಾ ರಾಜಕೀಯ ದುರುದ್ದೇಶ ಇದೆಯೋ ಗೊತ್ತಿಲ್ಲಾ ಎಂದರು.
ಇದನ್ನೂ ಓದಿ | ಶಿವಮೊಗ್ಗ ಸಿಟಿ ಮೇಲೆ ಬಹುಹೊತ್ತು ಹೆಲಿಕಾಪ್ಟರ್ ಹಾರಾಟ, ಬಂದಿದ್ಯಾರು? ಅಷ್ಟೊತ್ತು ಹಾರಿದ್ಯಾಕೆ?
ಕುಮಟಕ್ಕೆ ತೆರಳುವ ಮಾರ್ಗ ಮಧ್ಯೆ ಇಂಧನ ಭರ್ತಿಗಾಗಿ ಶಿವಮೊಗ್ಗ ಹೆಲಿಪ್ಯಾಡ್ನಲ್ಲಿ ಹೆಲಿಕಾಪ್ಟರ್ ಲ್ಯಾಂಡ್ ಮಾಡಲಾಗಿತ್ತು. ಬಳಿಕ ಸಚಿವರಾದ ನಾರಾಯಣಗೌಡ, ಗೋಪಾಲಯ್ಯ ಅವರೊಂದಿಗೆ ಡಾ..ಅಶ್ವಥನಾರಾಯಣ ಹೆಲಿಕಾಪ್ಟರ್ನಲ್ಲಿ ಕುಮಟಕ್ಕೆ ತೆರಳಿಸಿದರು.
ಇದನ್ನೂ ಓದಿ | ರಾಸಲೀಲೆ ಸಿಡಿ ಕೇಸ್, ಶಿವಮೊಗ್ಗದಲ್ಲಿ ರಾಮೇಶ್ ಜಾರಕಿಹೊಳಿ ಫೋಟೊಗೆ ಚಪ್ಪಲಿ ಏಟು, ರಾಜೀನಾಮೆಗೆ ಪಟ್ಟು
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]