ಶಿವಮೊಗ್ಗ ಲೈವ್.ಕಾಂ | BHADRAVATHI | 23 ಅಕ್ಟೋಬರ್ 2019
ಕೆರೆ ಕೋಡಿಯಲ್ಲಿ ತೇಲಿ ಹೋಗಿದ್ದ ವ್ಯಕ್ತಿಯ ಶವ ಇವತ್ತು ಪತ್ತೆಯಾಗಿದೆ. ಹೊಳೆಹೊನ್ನೂರು ಸಮೀಪದ ಎಮ್ಮೆಹಟ್ಟಿ ಗ್ರಾಮದಲ್ಲಿ ಘಟನೆ ನಡೆದಿದೆ.
ರವಿ (40) ಮೃತ ವ್ಯಕ್ತಿ. ನಿನ್ನೆ ಸಂಜೆ ಕೊಪ್ಪದ ಕೆರೆ ಕೋಡಿ ಮೇಲೆ ನಡೆದುಕೊಂಡು ಬರುವಾಗ ನೀರಿನ ರಭಸಕ್ಕೆ ಕಾಲು ಜಾರಿ ತೇಲಿ ಹೋಗಿದ್ದರು.
ರವಿಗಾಗಿ ರಾತ್ರಿ ಶೋಧ ಕಾರ್ಯ ನಡೆದರು ಪ್ರಯೋಜನವಾಗಿರಲಿಲ್ಲ. ಇವತ್ತು ಬೆಳಗ್ಗೆ ಕೆರೆಯ ಕೆಳಭಾಗದ ಗಿಡದಲ್ಲಿ ಶವ ಸಿಲುಕಿಕೊಂಡಿತ್ತು. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಹೊಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | [email protected]