ಶಿವಮೊಗ್ಗದ ಲೈವ್.ಕಾಂ | SORABA NEWS | 24 ಡಿಸೆಂಬರ್ 2021
ಕಾಲು ಜಾರಿ ಕೆರೆಗೆ ಬಿದ್ದು ಕಾರ್ಮಿಕರೊಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಮೃತದೇಹವನ್ನು ಕೆರೆಯಿಂದ ಮೇಲೆತ್ತಿದ್ದಾರೆ.
ತಾಲೂಕಿನ ಬೆನ್ನೂರು ರಸ್ತೆ ಕೆಲಸಕ್ಕೆ ಬಂದಿದ್ದ ಕಾರ್ಮಿಕ ಕೆರೆಯಲ್ಲಿ ಕಾಲು ಜಾರಿ ಮುಳುಗಿ ಮೃತಪಟ್ಟಿದ್ದಾನೆ. ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ಮಾಸೂರು ಗ್ರಾಮದ ಲಕ್ಷ್ಮಣಪ್ಪ (50) ಮೃತರು.
ರಸ್ತೆ ಕೆಲಸಕ್ಕೆ ಬಂದಿದ್ದ ಲಕ್ಷಣಪ್ಪ 2 ದಿನಗಳ ಹಿಂದೆ ಕಾಣೆಯಾಗಿದ್ದು ಗುರುವಾರ ಬೆನ್ನೂರು ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಆತ ಕಿವುಡ, ಮೂಖರಾಗಿದ್ದರು. ಸೊರಬ ಅಗ್ನಿಶಾಮಕದಳ ಸಿಬ್ಬಂದಿ ಶವ ಪತ್ತೆ ಮಾಡಿದ್ದಾರೆ.