ಮೇಷ : ಕುಟುಂಬ ಸದಸ್ಯರ ಜೊತೆ ಸೌಹಾರ್ದ ವಾತಾವರಣ ಸೃಷ್ಟಿಸಿಕೊಳ್ಳಬೇಕಿದೆ. ಅನಗತ್ಯ ಅಲೋಚನೆಗಳಿಂದ ನೆಮ್ಮದಿ ಭಂಗ.
ವೃಷಭ : ಕಷ್ಟಕಾಲಕ್ಕೆ ಅನುಕೂಲವಾಗುವಂತೆ ಹಣ ಸಂಗ್ರಹಿಸಿಡುವುದು ಸೂಕ್ತ. ಮುಂದೆ ಉಪಯೋಗ ಆಗಲಿದೆ. ಸೃಜನಶೀಲ ವ್ಯಕ್ತಿತ್ವದಿಂದ ಅನಿರೀಕ್ಷಿತ ಫಲ ಸಿಗಲಿದೆ.
ಮಿಥುನ : ನಿತ್ಯ ವ್ಯಾಯಾಮ ಮಾಡುವುದು ಆರೋಗ್ಯಕರ. ಮನಸನ್ನು ಮುದವಾಗಿ ಇಡಲಿದೆ. ನಿತ್ಯ ವ್ಯಾಯಾಮದ ಕಡೆ ಯೋಚನೆ ಸೂಕ್ತ. ದುಡುಕಿನ ನಿರ್ಧಾರಿಂದ ಸಮಸ್ಯೆ ಉಂಟಾಗಲಿದೆ.
ಕರ್ಕಾಟಕ : ಧ್ಯಾನದಿಂದ ನೆಮ್ಮದಿ ಮತ್ತು ಮಾನಸಿಕ ಶಕ್ತಿ ವೃದ್ಧಿಯಾಗಲಿದೆ. ಹಣಕಾಸು ದುರ್ಬಲ. ಹೆಚ್ಚು ಚಿಂತೆ ಮಾಡಬೇಕಾಗುತ್ತದೆ.
ಸಿಂಹ : ಒತ್ತಡ ನಿವಾರಣೆಗೆ ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯಬೇಕು. ಹಾಸ್ಯದ ಮಾತಿನಿಂದ ಸುತ್ತಲು ಇದ್ದವರಲ್ಲಿ ಉಲ್ಲಾಸ ಮೂಡಿಸಿ.
ಕನ್ಯಾ : ಕೆಲಸದ ಸ್ಥಳದಲ್ಲಿ ಮಹತ್ವದ ಬದಲಾವಣೆಯಿಂದ ಅನುಕೂಲ. ಹಣ ಹೂಡಿಕೆಯತ್ತ ಆಸಕ್ತಿ ಹೆಚ್ಚಳ.
ತುಲಾ : ಓದು ಮತ್ತು ಸಂಗೀತದಿಂದ ಮನಸಿಗೆ ಮುದ. ಚೈತನ್ಯ ಹೆಚ್ಚಲಿದೆ. ಉದ್ಯೋಗ ಮತ್ತು ಕುಟುಂಬದಲ್ಲಿ ಉಲ್ಲಾಸ.
ವೃಶ್ಚಿಕ : ಅನುಭವ ಮತ್ತು ಜ್ಞಾನ ಹಂಚಿಕೊಂಡರೆ ಮನ್ನಣೆ ಸಿಗುವುದು ನಿಶ್ಚಿತ. ಒತ್ತಡ ನಿವಾರಣೆಗೆ ಆಸಕ್ತಿಕರ ವಿಚಾರ ಓದುವುದು ಸೂಕ್ತ.
ಧನು : ವಾದಗಳಿಂದ ಸಾಧಿಸುವುದಕ್ಕಿಂತಲು ಕಳೆದುಕೊಳ್ಳುವುದು ಹೆಚ್ಚು. ವಾದಕ್ಕಿಳಿಯುವ ಮುನ್ನ ಮರು ಯೋಚಸುವುದು ಸೂಕ್ತ. ಪ್ರೀತಿಪಾತ್ರರೊಂದಿಗಿನ ಮಾತಿನಿಂದ ಸಂತೋಷ.
ಮಕರ : ಸಹೋದ್ಯೋಗಿಗಳ ಜೊತೆಗೆ ಬಾಂಧವ್ಯ ಉತ್ತಮವಾಗಿದ್ದರೆ ಕೆಲಸ ಸುಲಭ. ಆತುರದ ನಿರ್ಧಾರ, ಹೆಚ್ಚಿನ ನಂಬಿಕೆಗಳು ಭವಿಷ್ಯದಲ್ಲಿ ಕೆಡುಕು ಉಂಟು ಮಾಡಲಿವೆ.
ಕುಂಭ : ಸೂಕ್ತ ರೀತಿಯಲ್ಲಿ ಹಣಕಾಸು ನಿರ್ವಹಣೆ ಮಾಡಬೇಕು. ಸಂಪೂರ್ಣ ತಿಳಿವಳಿಕೆ ಗಳಿಸದೆ ವ್ಯಾಪಾರ, ವಹಿವಾಟಿನಲ್ಲಿ ಹೂಡಿಕೆ ಮಾಡುವುದು ಬೇಡ.
ಮೀನ : ಹಣ ಉಳಿಸುವ ಪ್ರಯತ್ನ ವಿಫಲ. ಸಣ್ಣಪುಟ್ಟದ್ದಕ್ಕು ದೊಡ್ಡ ಮಟ್ಟದ ಖರ್ಚು. ಮಾನಸಿಕ ನೆಮ್ಮದಿ ಇರುವುದಿಲ್ಲ. ಮಕ್ಕಳಿಗೆ ಅನಾರೋಗ್ಯ.
ಇದನ್ನೂ ಓದಿ – ಅಡಿಕೆ ಧಾರಣೆ | 11 ಸೆಪ್ಟೆಂಬರ್ 2023 | ಇವತ್ತು ಯಾವ್ಯಾವ ಮಾರುಕಟ್ಟೆಯಲ್ಲಿ ಎಷ್ಟಿದೆ ಅಡಿಕೆ ರೇಟ್?
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200