ಶಿವಮೊಗ್ಗ ಲೈವ್.ಕಾಂ | SHIMOGA NEWS | 22 JANUARY 2021
ಹುಣಸೋಡು ಸ್ಫೋಟ ಪ್ರಕರಣ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಪ್ರತಿಕ್ರಿಯೆ ನೀಡಿದ್ದಾರೆ.
ಏನಂದರು ಮಿನಿಸ್ಟರ್?
ಅಕ್ರಮ ಕಲ್ಲು ಗಣಿಗಾರಿಕೆ ವಿರುದ್ಧ ಈ ಹಿಂದೆ ಹಲವಾರು ಭಾರಿ ಕ್ರಮ ಕೈಗೊಳ್ಳಲಾಗಿದೆ. ಮುಂದೆನೂ ಕ್ರಮ ಕೈಗೊಳ್ಳಲಾಗುತ್ತದೆ.
ಈಗ ಪ್ರಶ್ನೆ ಇರುವುದು ಅಕ್ರಮವೋ ಅಲ್ಲವೋ ಅನ್ನವುದಲ್ಲ. ಇಷ್ಟೊಂದು ಪ್ರಮಾಣದ ಸ್ಫೋಟಕ್ಕೆ ಕಾರಣವೇನು?
ಬರಿ ಜಿಲೆಟಿಕ್ ಕಡ್ಡಿಯಿಂದ ಇಷ್ಟೊಂದು ಪ್ರಮಾಣದಲ್ಲಿ ಸ್ಫೋಟ ಸಂಭವಿಸಲು ಸಾದ್ಯವಿದೆಯೇ? ಅಥವಾ ಬೇರೆ ಏನಾದರೂ ಇತ್ತಾ ಅನ್ನುವ ಕುರಿತು ಪರಿಶೀಲನೆ ನಡೆಯಬೇಕಿದೆ.
ತಜ್ಞರ ತಂಡು ಬಂದ ಪರಿಶೀಲನೆ ನಡೆಸಿ, ವರದಿ ನೀಡಿದ ಬಳಿಕ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇವೆ.
ಇಂತಹ ಘಟನೆಯನ್ನು ನಾನೆಂದು ಕಂಡು, ಕೇಳಿಲ್ಲ. ಬೆಂಗಳೂರಿನಿಂದ ಬೆಳಗ್ಗೆ ಬಂದಿದ್ದೇನೆ. ನಮ್ಮನೆಯಲ್ಲೂ ಕಿಟಕಿ, ಬಾಗಿಲು ನಲುಗಿ ಹೋಗಿದ್ದಾವೆ.
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]