ಶಿವಮೊಗ್ಗ ಲೈವ್.ಕಾಂ | SHIMOGA NEWS | 10 MAY 2021
ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಮತ್ತು ಕುಮಾರಸ್ವಾಮಿ ಅವರು ಬಾಯಿಗೆ ಬೀಗ ಹಾಕಿಕೊಂಡರೆ ಲಾಕ್ ಡೌನ್ ಯಶಸ್ವಿಯಾಗಲಿದೆ ಎಂದು ಸಚಿವ ಈಶ್ವರಪ್ಪ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಕೆ.ಎಸ್.ಈಶ್ವರಪ್ಪ ಅವರು, ರಾಜ್ಯದಲ್ಲಿ ಜನರು ಸಾಯುತ್ತಿರುವ ಹೊತ್ತಲ್ಲಿ ಬರೀ ಟೀಕೆ ಮಾಡುತ್ತಿದ್ದೀರ. ಎಸಿ ರೂಮಲ್ಲಿ ಕುಳಿತು ಟೀಕೆ ಮಾಡ್ತಾರೋ, ಎಲ್ಲಿ ಕುಳಿತು ಟೀಕಿಸುತ್ತಾರೋ ಗೊತ್ತಿಲ್ಲ. ಒಳ್ಳೆ ಸಲಹೆ ಕೊಡಲಿ ಎಂದರು.
ನಾವೇನು ಪ್ರಿಂಟ್ ಮಾಡ್ತೀವಾ?
ಲಾಕ್ ಡೌನ್ ಮಾಡುವಾಗ ಕುಟುಂಬಗಳಿಗೆ ಹತ್ತು ಸಾವಿರ ಕೊಡಿ ಅಂತಾರೆ. ನಾವೇನು ಪ್ರಿಂಟ್ ಮಾಡ್ತೀವಾ. ಒಳ್ಳೆಯ ಸಲಹೆ ಕೊಡಲಿ ನಾವು ಅದನ್ನು ಅಳವಡಿಸಿಕೊಳ್ಳುತ್ತೇವೆ ಎಂದರು.
ಸಚಿವ ಈಶ್ವರಪ್ಪ ಅವರ ಹೇಳಿಕೆ ಪೂರ್ಣ ವಿಡಿಯೋ ಇಲ್ಲಿದೆ