ಶಿವಮೊಗ್ಗ ಲೈವ್.ಕಾಂ | 04 ಏಪ್ರಿಲ್ 2019
ಎಸಿಬಿ ಡಿವೈಎಸ್ಪಿ ಎಂದು ಹೇಳಿ ಸೊರಬ ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿಗೆ ಬ್ಲ್ಯಾಕ್’ಮೇಲ್ ಮಾಡಿದ ವ್ಯಕ್ತಿಯೊಬ್ಬರ ವಿರುದ್ಧ ದೂರು ದಾಖಲಾಗಿದೆ.
ಮಂಜುನಾಥ್ ಎಂದು ಹೇಳಿಕೊಂಡು ಕರೆ ಮಾಡಿದ್ದ ವ್ಯಕ್ತಿ ವಿರುದ್ಧ ಕೆ.ಸಿ.ದೇವರಾಜೇಗೌಡ, ಸೊರಬ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
‘ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಅವರ ಆಪ್ತರಾದ ನಿಮ್ಮಲ್ಲಿ ಅವರ ಹಣ ಇಡಲಾಗಿದೆ. ಈ ಕುರಿತು ಚರ್ಚಿಸಬೇಕಿದೆ. ಕೂಡಲೇ ವೈಯಕ್ತಿಕವಾಗಿ ನನಗೆ ಭೇಟಿ ನೀಡಿ. ಇಲ್ಲವಾದರೆ, ಹಾಸನದಲ್ಲಿರುವ ನಿಮ್ಮ ಮನೆಯ ಮೇಲೆ ಎಸಿಬಿ ದಾಳಿ ಮಾಡಬೇಕಾಗುತ್ತದೆ’ ಎಂದು ಫೋನ್ ಮಾಡಿ ಬೆದರಿಸಿರುವುದಾಗಿ ದೇವರಾಜೇಗೌಡ ದೂರಿನಲ್ಲಿ ತಿಳಿಸಿದ್ದಾರೆ.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200
ಸುದ್ದಿಗಾಗಿ ಮೊಬೈಲ್ ನಂಬರ್ | 9964634494
ಈ ಮೇಲ್ | [email protected]