ಶಿವಮೊಗ್ಗದ ಲೈವ್.ಕಾಂ | HOSANAGARA NEWS | 23 ಜನವರಿ 2022
ಪಟಗುಪ್ಪೆ ಸೇತುವೆ ಬಳಿ ನಾಪತ್ತೆ ಆಗಿರುವ ಪ್ರಕಾಶ್ ಟ್ರಾವೆಲ್ಸ್ ಮಾಲೀಕ ಪ್ರಕಾಶ್ ಅವರ ಶೋಧ ಕಾರ್ಯ ಎರಡನೆ ದಿನಕ್ಕೆ ಕಾಲಿಟ್ಟಿದೆ. ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ಆರಂಭಿಸಿದ್ದಾರೆ.
ಪ್ರಕಾಶ್ ಅವರ ಕಾರು ಪತ್ತೆಯಾದ ಸ್ಥಳದಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ. ಶರಾವತಿ ಹಿನ್ನೀರು ಭಾಗದಲ್ಲಿ ಬೆಳಗ್ಗೆಯಿಂದ ಶೋಧ ನಡೆಸಲಾಗುತ್ತಿದೆ.
ಒಂದು ಸುತ್ತು ಮುಕ್ತಾಯ
ಅಗ್ನಿಶಾಮಕ ಸಿಬ್ಬಂದಿ ಬೆಳಗ್ಗೆ ಒಂದು ಸುತ್ತು ಪರಿಶೀಲನೆ ನಡೆಸಿದರು. ಶರಾವತಿ ಹಿನ್ನೀರು ಭಾಗದಲ್ಲಿ ಬೋಟ್ ಮೂಲಕ ಶೋಧ ನಡೆಸಲಾಯಿತು. ಆದರೆ ಈವರೆಗೂ ಸುಳಿವು ಸಿಕ್ಕಿಲ್ಲ. ಸ್ಥಳೀಯ ಮುಳುಗು ತಜ್ಞರು ಕೂಡ ಶೋಧ ಕಾರ್ಯದಲ್ಲಿ ನೆರವಾಗಿದ್ದಾರೆ.
ಈಗ ಮತ್ತೊಂದು ಸುತ್ತಿನ ಕಾರ್ಯಾಚರಣೆ ಆರಂಭಿಸಲಾಗಿದೆ. ಕಾರ್ಯಾಚರಣೆ ವೀಕ್ಷಿಸಲು ಸೇತುವೆ ಮೇಲೆ ಜನ ಸೇರಿದ್ದಾರೆ.