SHIVAMOGGA LIVE NEWS | 23 ಮಾರ್ಚ್ 2022
ಇವತ್ತು ಕೋಟೆ ಮಾರಿಕಾಂಬ ದೇವಿ ಜಾತ್ರೆಯ ಎರಡನೆ ದಿನ. ದೇವಿಯನ್ನು ಮಾರಿ ಗದ್ದುಗೆ ಮೇಲೆ ಪ್ರತಿಷ್ಠಾಪನೆ ಮಾಡಲಾಗಿದೆ. ದೊಡ್ಡ ಸಂಖ್ಯೆಯ ಭಕ್ತರು ದೇಗುಲಕ್ಕೆ ಆಗಮಿಸುತ್ತಿದ್ದು, ಹರಕೆ ತೀರಿಸಿ, ಪೂಜೆ ಸಲ್ಲಿಸಿ ಪುನೀತರಾಗುತ್ತಿದ್ದಾರೆ.
ಕೋಟೆ ಮಾರಿಕಾಂಬ ದೇವಿ ದೇವಸ್ಥಾನದ ಮಾರಿ ಗದ್ದುಗೆ ಮೇಲೆ ಮಾರಿಕಾಂಬ ದೇವಿಯನ್ನು ಪ್ರತಿಷ್ಠಾಪಿಸಲಾಗಿದೆ. ಬೆಳಗ್ಗೆಯಿಂದ ಸಾವಿರಾರು ಸಂಖ್ಯೆಯ ಭಕ್ತರು ದೇವಿಯ ದರ್ಶನ ಪಡೆಯುತ್ತಿದ್ದಾರೆ.
ಬೇವಿನ ಹರಕೆ ತೀರಿಸುತ್ತಿದ್ದಾರೆ
ಶಿವಮೊಗ್ಗ ನಗರದ ವಿವಿಧೆಡೆಯಿಂದ ಜನರು ಕಾಲ್ನಡಿಗೆಯಲ್ಲಿ ಬಂದು ದೇವಿಯ ದರ್ಶನ ಪಡೆಯುತ್ತಿದ್ದಾರೆ. ಬೇವಿನ ಉಡುಗೆ ತೊಟ್ಟು ಬಂದು ದೇವಿಗೆ ಹರಕೆ ತೀರಿಸುತ್ತಿದ್ದಾರೆ. ಬೇವಿನ ಉಡುಗೆ ತೆಗೆದಿರಿಸಲು ದೇಗುಲದ ಮುಂದೆಯೆ ಅವಕಾಶ ಕಲ್ಪಿಸಲಾಗಿದೆ. ಮಹಿಳೆಯರು ಮತ್ತು ಪುರುಷರಿಗೆ ಪ್ರತ್ಯೇಕ ವವಸ್ಥೆ ಮಾಡಲಾಗಿದೆ.
ದೇವಿ ದರ್ಶನಕ್ಕೆ ಸಕಲ ವ್ಯವಸ್ಥೆ
ನೂಕುನುಗ್ಗಲು ತಗ್ಗಿಸಲು ಈ ಭಾರಿ ದೇವಸ್ಥಾನದ ಸುತ್ತಮುತ್ತ ಯಾವುದೆ ಅಂಗಡಿಗಳಿಗೆ ಅವಕಾಶ ಕಲ್ಪಿಸಿಲ್ಲ. ಹಾಗಾಗಿ ಜನ ಸಂಚಾರ ಸುಗಮವಾಗಿದೆ. ದೇವಸ್ಥಾನದ ಒಳಗೆ ಸರತಿಯಲ್ಲಿ ಜನರು ತೆರಳಲು ವ್ಯವಸ್ಥೆ ಕಲ್ಪಿಸಲಾಗಿದೆ. ಗಣ್ಯರು, ಪಾಸ್ ಹೊಂದಿರುವವರಿಗೆ ಪ್ರತ್ಯೇಕ ಪ್ರವೇಶ ಕಲ್ಪಿಸಲಾಗಿದೆ.
ದೇವಸ್ಥಾನದ ಬಾಗಿಲಲ್ಲೂ ಪೂಜೆ
ಮತ್ತೊಂದೆಡೆ ದೇವಸ್ಥಾನದ ಬಾಗಿಲಲ್ಲೂ ಜನರು ಪೂಜೆ ಸಲ್ಲಿಸುತ್ತಿದ್ದಾರೆ. ದೇಗುಲದ ಮುಖ್ಯ ದ್ವಾರದ ಮುಂಭಾಗ ಹೂವು, ಹಣ್ಣು ಇಟ್ಟು ಪೂಜೆ ಸಲ್ಲಿಸಲಾಗುತ್ತಿದೆ. ತಂಬಿಟ್ಟಿನ ದೀಪ ಬೆಳಗಿ ಮಹಿಳೆಯರು ಹರಕೆ ತೀರಿಸುತ್ತಿದ್ದಾರೆ.
ಸರ್ವ ಭಕ್ತರಿಗೂ ಪ್ರಸಾದ
ಇನ್ನು, ದೇವಿಯ ದರ್ಶನಕ್ಕೆ ಬರುವ ಸರ್ವ ಭಕ್ತರಿಗೂ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ. ದೇವಸ್ಥಾನದ ಆವರಣದಲ್ಲಿ ಬೃಹತ್ ಪೆಂಡಾಲ್ ಹಾಕಲಾಗಿದೆ. ಇಲ್ಲಿಯೆ ಪ್ರಸಾದ ಸೇವನೆಗೆ ಅವಕಾಶ ಕಲ್ಪಿಸಲಾಗಿದೆ.
ಇದನ್ನೂ ಓದಿ | ಇವತ್ತಿನ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ
ಈ ಮೇಲ್ – [email protected]
WhatsApp Number – 7411700200