ಶಿವಮೊಗ್ಗ ಲೈವ್.ಕಾಂ | SHIMOGA NEWS | 29 ಅಕ್ಟೋಬರ್ 2021
ಅಭಿಮಾನಿಗಳು ಭಾವೋದ್ವೇಗಕ್ಕೆ ಒಳಗಾಗಬಾರದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಮನವಿ ಮಾಡಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಆರಗ ಜ್ಞಾನೇಂದ್ರ ಅವರು, ಕಾನೂನು ಸುವ್ಯವಸ್ಥೆ ಕಾಪಾಡಲು ಏನೆಲ್ಲ ಕ್ರಮ ಕೈಗೊಳ್ಳಬೇಕೋ ಅದನ್ನು ಮಾಡಿದ್ದೇವೆ. ಎಲ್ಲಾ ಜಿಲ್ಲೆಗಳ ವರಿಷ್ಠಾಧಿಕಾರಿ ಅವರೊಂದಿಗೆ ಚರ್ಚೆ ಮಾಡಿದ್ದೇನೆ ಎಂದು ತಿಳಿಸಿದರು.
ಸಾಗರ, ತೀರ್ಥಹಳ್ಳಿಗೆ ಬಂಧುಗಳು
ಪುನಿತ್ ರಾಜ್ ಕುಮಾರ್ ಅವರಿಗೆ ಮಲೆನಾಡಿನೊಂದಿಗೆ ಉತ್ತಮ ಒಡನಾಟವಿದೆ. ಸಾಗರ, ತೀರ್ಥಹಳ್ಳಿಯಲ್ಲಿ ಹಲವು ಬಂಧುಗಳಿದ್ದದಾರೆ. ಮೊನ್ನೆ ಶಾಸಕ ಹಾಲಪ್ಪ ಅವರ ಮಗಳ ಮದುವೆ ಸಮಾರಂಭಕ್ಕೂ ಪುನಿತ್ ರಾಜ್ ಕುಮಾರ್ ಅವರು ಬಂದಿದ್ದರು. ನಾನೂ ಅವರು ಅಭಿಮಾನಿ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಸ್ಮರಿಸಿಕೊಂಡರು.