ಶಿವಮೊಗ್ಗ ಲೈವ್.ಕಾಂ | SHIMOGA NEWS | 17 ಅಕ್ಟೋಬರ್ 2021
ನಿರ್ಜನ ಪ್ರದೇಶದಲ್ಲಿ ಮಾರಕಾಸ್ತ್ರಗಳಿಂದ ಪತ್ನಿಯ ಹತ್ಯೆ ಮಾಡಿದ ಪತಿ, ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಶಿವಮೊಗ್ಗದ ಗಾಡಿಕೊಪ್ಪ ಸಮೀಪದ ವಾಸು ಸತ್ಯ ಬಡಾವಣೆಯಲ್ಲಿ ಘಟನೆ ಸಂಭವಿಸಿದೆ. ಕೌಸರ್ ಫಿಜಾ ಎಂಬುವವರ ಹತ್ಯೆಯಾಗಿದೆ.
ಕೊಂದು ಶರಣಾದ ಪತಿ
ಆಯನೂರಿನ ಕೌಸರ್ ಫಿಜಾ, ಟಿಪ್ಪು ನಗರದ ಶೋಯಬ್ ಎಂಬಾತನೊಂದಿಗೆ ವಿವಾಹವಾಗಿದ್ದರು. ಇಬ್ಬರಿಗೆ ಒಂದು ಮಗು ಇದೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಕೌಸರ್ ಫಿಜಾಳನ್ನು ಕಾರಿನಲ್ಲಿ ಶೋಯಬ್ ನಿರ್ಜನ ಪ್ರದೇಶಕ್ಕೆ ಕರೆತಂದಿದ್ದ.
ಮಾರಕಾಸ್ತ್ರಗಳಿಂದ ಕೌಸರ್ ಫಿಜಾಳನ್ನು ಹತ್ಯೆ ಮಾಡಿ, ತುಂಗಾ ನಗರ ಠಾಣೆಗೆ ತೆರಳಿ ಶರಣಾಗಿದ್ದ. ವಿಚಾರ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಮೃತದಹೇವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.