ಶಿವಮೊಗ್ಗ ಲೈವ್.ಕಾಂ | SHIMOGA NEWS | 3 NOVEMBER 2020
ಕೋರಂ ಕೊರತೆಯಿಂದಾಗಿ ಮೂರು ಬಾರಿ ಮುಂದೂಡಿಕೆ ಆಗಿದ್ದ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆ ಇವತ್ತು ಕೊನೆಗೂ ನಡೆಯಿತು. ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರು ಇವತ್ತು ಸಭೆಗೆ ಹಾಜರಾಗಿದ್ದರು. ಆದರೆ ಸಭೆ ಆರಂಭವಾಗುತ್ತಿದ್ದಂತೆ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು.
ಮೂರು ಭಾರಿ ಮುಂದೂಡಿಕೆಯಾಗಿತ್ತು
ಈ ಹಿಂದೆ ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರು ಗೈರಾಗಿದ್ದರು. ಹಾಗಾಗಿ ಕೋರಂ ಕೊರತೆಯಿಂದಾಗಿ ಮೂರು ಭಾರಿ ಸಭೆ ಮುಂದಕ್ಕೆ ಹೋಗಿತ್ತು. ಇವತ್ತು ಸಭೆಗೆ ಹಾಜರಾಗಿದ್ದ ಮೈತ್ರಿ ಪಕ್ಷದ ಸದಸ್ಯರು, ಅಧ್ಯಕ್ಷರ ವಿರುದ್ಧದ ತಮ್ಮ ಮುನಿಸು ಹೊರ ಹಾಕಿದರು.
ಅಧ್ಯಕ್ಷರ ವಿರುದ್ಧ ಆಕ್ರೋಶ
ಮೂರು ಸ್ಥಾಯಿ ಸಮಿತಿಗಳನ್ನು ಬಿಜೆಪಿಗೆ ಬಿಟ್ಟುಕೊಟ್ಟಿದ್ದರಿಂದ ಅಧ್ಯಕ್ಷ ಜ್ಯೋತಿ ಎಸ್.ಕುಮಾರ್ ಅವರ ವಿರುದ್ಧ ಜೆಡಿಎಸ್, ಕಾಂಗ್ರೆಸ್ ಮೈತ್ರಿ ಆಕ್ರೋಶ ವ್ಯಕ್ತಪಡಿಸಿತ್ತು. ಇದೇ ಕಾರಣಕ್ಕೆ ಮೂರು ಸಭೆಯಿಂದ ಮೈತ್ರಿ ಪಕ್ಷಗಳು ದೂರ ಉಳಿದಿದ್ದವು. ಇವತ್ತು ಸಭೆಗೆ ಆಗಮಿಸಿದ ಜೆಡಿಎಸ್, ಕಾಂಗ್ರೆಸ್ ಸದಸ್ಯರು ಸದನದ ಬಾವಿಗೆ ಇಳಿದು ಪ್ರತಿಭಟನೆ ನಡೆಸಿದರು. ಅಧ್ಯಕ್ಷರ ವಿರುದ್ಧ ಧಿಕ್ಕಾರ ಕೂಗಿದರು. ಈ ವೇಳೆ ಅಧ್ಯಕ್ಷರು, ಬಿಜೆಪಿ ಸದಸ್ಯರು ಮತ್ತು ಮೈತ್ರಿ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು.
VIDEO REPORT
ಸಭೆಯಲ್ಲೇ ಉಳಿದ ಕಾಂಗ್ರೆಸ್ ಶಾಸಕ
ಜೆಡಿಎಸ್, ಕಾಂಗ್ರೆಸ್ ಜಿಲ್ಲಾ ಪಂಚಾಯಿತಿ ಸದಸ್ಯರು ಸಭೆ ಬಹಿಷ್ಕರಿಸಿದರು. ಆದರೆ ಭದ್ರಾವತಿ ಕಾಂಗ್ರೆಸ್ ಶಾಸಕ ಬಿ.ಕೆ.ಸಂಗಮೇಶ್ವರ ಅವರು ಸಭೆಯಲ್ಲಿ ಉಳಿದರು, ಹಲವು ವಿಚಾರಗಳ ಕುರಿತು ಚರ್ಚೆಯನ್ನೂ ನಡೆಸಿದರು. ಎರಡು ವರ್ಷದ ಬಳಿಕ ಇದೆ ಮೊದಲ ಬಾರಿಗೆ ಸಂಗಮೇಶ್ವರ ಅವರು ಸಭೆಗೆ ಹಾಜರಾಗಿದ್ದರು. ಮೈತ್ರಿ ಸದಸ್ಯರೆಲ್ಲ ಹೊರ ನಡೆಯುತ್ತಿದ್ದಾಗ ಸಂಗಮೇಶ್ವರ ಅವರು ಮಾತ್ರ ತಾವು ಹೊರಬರಲ್ಲ ಎಂದು ಕೈ ಸಂಜ್ಞೆ ಮಾಡಿ ತೋರಿಸತ್ತಿದ್ದರು.
ಜಿಲ್ಲಾ ಪಂಚಾಯಿತಿ ಮುಂದೆ ಧರಣಿ
ಸಭೆಯಿಂದ ಹೊರ ನಡೆದ ಜೆಡಿಎಸ್, ಕಾಂಗ್ರೆಸ್ ಸದಸ್ಯರು ಜಿಲ್ಲಾ ಪಂಚಾಯಿತಿ ಕಚೇರಿ ಮುಂದೆ ಧರಣಿ ನಡೆಸಿದರು. ಬಿಜೆಪಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷರ ವಿರುದ್ಧ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]