ಶಿವಮೊಗ್ಗ ಲೈವ್.ಕಾಂ | SHIMOGA NEWS | 6 ಡಿಸೆಂಬರ್ 2021
ಶಿವಮೊಗ್ಗದ ಒಕ್ಕಲಿಗ ಸಮುದಾಯ ಭಾವನದಲ್ಲಿ ನಡೆದ ಖಾದ್ಯ ಮೇಳಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಚುಂಚಾದ್ರಿ ಮಹಿಳಾ ವೇದಿಕೆ, ಒಕ್ಕಲಿಗರ ಸಂಘದ ಸಹಯೋಗದೊಂದಿಗೆ ಖಾದ್ಯ ಮೇಳ ಆಯೋಜಿಸಲಾಗಿತ್ತು.
ವಿವಿಧ ತಿಂಡಿ, ತನಿಸು, ಪಾನಿಯಗಳನ್ನು ಖಾದ್ಯ ಮೇಳದಲ್ಲಿ ಇಡಲಾಗಿತ್ತು. ಗೃಹೋಪಯೋಗಿ ವಸ್ತುಗಳು, ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟವನ್ನು ಆಯೋಜಿಸಲಾಗಿತ್ತು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಿ.ಮಂಜುನಾಥ್ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಗಾಂಧೀಜಿ ಕಂಡ ಗ್ರಾಮ ಸ್ವರಾಜ್ಯದ ಕನಸು ಇಂತಹ ಕಾರ್ಯಕ್ರಮಗಳ ಮೂಲಕ ಸಾಕಾರಗೊಳ್ಳುತ್ತಿದೆ. ಕೋವಿಡ್ ಸವಾಲುಗಳ ನಡುವೆ ಇಂತಹ ಸಾಂಸ್ಕೃತಿಕ ವಾತಾವರಣ ಉಂಟು ಮಾಡುವುದು ಉತ್ತಮ ಕೆಲಸ ಎಂದರು.
ಪ್ರಮುಖರಾದ ಭಾರತಿ ರಾಮಕೃಷ್ಣ, ಡಾ.ಮೋಹನ್ ಚಂದ್ರಗುತ್ತಿ, ಶ್ರೀಕಾಂತ್, ಬಿ.ಎ.ರಮೇಶ್ ಹೆಗ್ಡೆ, ಡಾ.ನೇತ್ರಾ ಗೌಡ, ಅಂಜು ಸುರೇಶ್, ಚೇತನ್, ಮಮತಾ ಶಿವಣ್ಣ ಸೇರಿದಂತೆ ಹಲವರು ಇದ್ದರು.