SHIVAMOGGA LIVE NEWS | Politics News | 7 ಏಪ್ರಿಲ್ 2022
ಆರೋಪಿಯೊಬ್ಬ ಬಿಜೆಪಿ ಕಾರ್ಯಕರ್ತನಾಗಿದ್ದರೆ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಚೌ ಚೌ ಬಾತ್, ಟೀ ತರಿಸಿ, ಕೂರಿಸಿ ಮಾತನಾಡಿಸುತ್ತಾರೆ. ಆದರೆ ದೂರುದಾರನನ್ನು ನಿಲ್ಲಿಸಿ ಮಾತನಾಡಿಸುತ್ತಾರೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರು, ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಬಿಜೆಪಿ ಕಾರ್ಯಕರ್ತರು ಎಂದರೆ ಭಾರಿ ಗೌರವ. ಭಾನುಪ್ರಕಾಶ್ ಅವರು ಇಂಚಾರ್ಜ್ ಎಂದು ಗೊತ್ತಿರಲಿಲ್ಲ. ಆರೋಪಿ ಬಿಜೆಪಿ ಪಕ್ಷಕ್ಕೆ ಸೇರಿದವನಾದರೆ ಟೀ ತರಿಸಿ ಕೂರಿಸಿ ಮಾತನಾಡಿಸುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜಿ ಮಾಡಿಸಲು ಮುಂದಾಗುತ್ತಾರೆ
ಬಿಜೆಪಿಯವರು ತಪ್ಪು ಮಾಡಿದಲ್ಲೆಲ್ಲ ಪೊಲೀಸರು ರಾಜಿ ಮಾಡಿಸುತ್ತಿದ್ದಾರೆ. ಕಾಂಗ್ರೆಸ್’ನವರು ತಪ್ಪು ಮಾಡಿದರೆ ಕೂಡಲೆ ಪ್ರಕರಣ ದಾಖಲು ಮಾಡಿ, ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸುತ್ತಾರೆ. ಕಲ್ಲು ಕಂಬಗಳನ್ನು ಕದ್ದುಕೊಂಡು ಹೋಗಿರುವ ಕುರಿತು ದೂರು ಕೊಟ್ಟರೆ ಪ್ರಕರಣ ದಾಖಲು ಮಾಡಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿ ಅವರಿಗೂ ತಿಳಿಸಲಾಗಿದೆ ಎಂದರು.
ಪೊಲೀಸ್ ಠಾಣೆಯಿಂದ ಕರೆ ಮಾಡಿ, ರಾಜಿ ಮಾಡಿಕೊಳ್ಳುವಂತೆ ದೂರುದಾರರಿಗೆ ತಿಳಿಸುತ್ತಿದ್ದಾರೆ. ಘಟನೆ ಖಂಡಿಸಿ ಗ್ರಾಮ ಪಂಚಾಯಿತಿ ಕಚೇರಿ ಮುಂಭಾಗ ಧರಣಿ ಸತ್ಯಾಗ್ರಹ ಮಾಡುತ್ತೇನೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಎಚ್ಚರಿಸಿದರು.
Politics News
ಇದನ್ನೂ ಓದಿ | ಇವತ್ತಿನ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ
ಈ ಮೇಲ್ – [email protected]
WhatsApp Number – 7411700200