ಈಗ ಬಟ್ಟೆ ಒಗೆಯೋದು ಬಹಳ ಸುಲಭ, ಹೇಗದು? | ವಿಡಿಯೋಗಾಗಿ ಕ್ಲಿಕ್ ಮಾಡಿ
ಶಿವಮೊಗ್ಗ ಲೈವ್.ಕಾಂ | THIRTHAHALLI NEWS | 26 DECEMBER 2020
ಬೀಸು ಗ್ರಾಮಧ ರೈತ ರಂಜನ್ ಅವರ ಅಡಕೆ ತೋಟದಲ್ಲಿ ಎರಡು ಸಾವಿರ ಅಡಕೆ ಗಿಡಗಳನ್ನು ಕಡಿದು ಹಾಕಿರುವ ಅರಣ್ಯ ಇಲಾಖೆ ಕ್ರಮ ಖಂಡಿಸಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರ ನೇತೃತ್ವದಲ್ಲಿ ಪಾದಯಾತ್ರೆ ನಡೆಸಲಾಯಿತು.
20 ಕಿ.ಮೀ. ಪಾದಯಾತ್ರೆ
ಇವತ್ತು ಬೆಳಗ್ಗೆ ಬೀಸು ಗ್ರಾಮದಲ್ಲಿ ರೈತ ರಂಜನ್ ಅವರ ತೋಟದಿಂದ ಪಾದಯಾತ್ರೆ ಆರಂಭಿಸಲಾಯಿತು. ಬೀಸು, ಕಡೇಗದ್ದೆ, ಆರಗ ಮೂಲಕ ತೀರ್ಥಹಳ್ಳಿ ಅರಣ್ಯ ಇಲಾಖೆ ಕಚೇರಿವರೆಗೆ ಪಾದಯಾತ್ರೆ ನಡೆಯಿತು.
ಮಾರ್ಗದುದ್ದಕ್ಕೂ ಉತ್ತಮ ಪ್ರತಿಕ್ರಿಯೆ
ಮಾಜಿ ಸಚಿವ ಕಿಮ್ಮೆನೆ ರತ್ನಾಕರ್ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಪಾದಯಾತ್ರೆಗೆ ಮಾರ್ಗದುದ್ದಕ್ಕೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಸುತ್ತಮುತ್ತ ಗ್ರಾಮಸ್ಥರು ಪಾದಯಾತ್ರೆ ನಡೆಸುತ್ತಿದ್ದವರಿಗೆ ಬೆಂಬಲ ಸೂಚಿಸಿದರು.
ಕಿಮ್ಮನೆ ಕಪ್ಪು ಶರ್ಟ್
ಅಡಕೆ ಗಿಡಗಳನ್ನು ಕಿತ್ತೊಗೆದ ಅಧಿಕಾರಿಗಳ ಕ್ರಮ ಖಂಡಿಸಲು ಮಾಜಿ ಸಚಿವ ಕಿಮ್ಮೆನೆ ರತ್ನಾಕರ್ ಕಪ್ಪು ಶರ್ಟ್ ತೊಟ್ಟಿದ್ದರು. ಈ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಕಾರ್ಯಕರ್ತರ ಪಡೆ
ಪಾದಯಾತ್ರೆಗೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ತೀರ್ಥಹಳ್ಳಿ ಮಾತ್ರವಲ್ಲದೆ ಶಿವಮೊಗ್ಗ, ಹೊಸನಗರ ಸೇರದಂತೆ ವಿವಿಧೆಡೆಯ ಕಾಂಗ್ರೆಸ್ ಕಾರ್ಯಕರ್ತರು ಬೆಂಬಲ ವ್ಯಕ್ತಪಡಿಸಿದರು.
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]