ಶಿವಮೊಗ್ಗದ ಲೈವ್.ಕಾಂ | SHIMOGA NEWS | 25 ಫೆಬ್ರವರಿ 2022
ಶಿವಮೊಗ್ಗದ ಗೆಜ್ಜೇನಹಳ್ಳಿ ಗ್ರಾಮದ ಗದ್ದೆಯಲ್ಲಿ ಕಾಣಿಸಿಕೊಂಡ ಮಣ್ಣು ಮುಕ್ಕ ಹಾವನ್ನು ಸ್ನೇಕ್ ಕಿರಣ್ ಸೆರೆ ಹಿಡಿದು, ಅರಣ್ಯಕ್ಕೆ ಬಿಟ್ಟಿದ್ದಾರೆ.
ವಿಜಯ ನಾಯ್ಕ್ ಎಂಬುವವರ ಗದ್ದೆಯಲ್ಲಿ ಫೆ.24ರ ರಾತ್ರಿ ಮಣ್ಣು ಮುಕ್ಕ ಹಾವು ಕಾಣಿಸಿಕೊಂಡಿದೆ. ಕೂಡಲೆ ಸ್ನೇಕ್ ಕಿರಣ್ ಅವರಿಗೆ ಕರೆ ಮಾಡಿ, ಹಾವು ಕಾಣಿಸಿಕೊಂಡಿರುವ ಕುರಿತು ಮಾಹಿತಿ ನೀಡಲಾಯಿತು.
ಸ್ಥಳಕ್ಕೆ ಆಗಮಿಸಿದ ಸ್ನೇಕ್ ಕಿರಣ್ ಮಣ್ಣು ಮುಕ್ಕ ಹಾವು ಹಿಡಿದಿದ್ದಾರೆ. ಹಾವು ಮೂರುವರೆ ಅಡಿ ಉದ್ದವಿದೆ. ಮಣ್ಣು ಮುಕ್ಕ ಹಾವಿನ ಕುರಿತು ಸ್ನೇಕ್ ಕಿರಣ್ ಸ್ಥಳೀಯರಿಗೆ ಮಾಹಿತಿ ನೀಡಿದರು. ಬಳಿಕ ಅದನ್ನು ಅರಣ್ಯಾಧಿಕಾರಿಗಳ ಮೂಲಕ ಕಾಡಿಗೆ ಬಿಡಲಾಯಿತು.
ಇದನ್ನೂ ಓದಿ | ಬೈಕ್ ಮಾಸ್ಕ್’ನಲ್ಲಿ ಮೂರುವರೆ ಅಡಿ ಉದ್ದದ ಹಸಿರು ಹಾವು