SHIVAMOGGA LIVE NEWS | 5 DECEMBER 2022
ಭದ್ರಾವತಿ : ಕೆರೆಯ ನೀರನ್ನು ಖಾಲಿ ಮಾಡಿ, ಮಣ್ಣು ತೆಗೆದು ಮಾರಾಟ ಮಾಡುತ್ತಿದ್ದ ಆರೋಪದ ಹಿನ್ನೆಲೆ ಗುತ್ತಿಗೆದಾರನ ವಿರುದ್ಧ ಪ್ರಕರಣ ದಾಖಲಾಗಿದೆ. (lake scam)
ನಜೀರ್ ಅಹಮದ್ ಎಂಬುವವರು ಭದ್ರಾವತಿ ತಾಲೂಕು ಸಿದ್ದಾಪುರ ಕೆರೆಯಲ್ಲಿ (lake scam) ನೀರು ಖಾಲಿ ಮಾಡಿ, ಮಣ್ಣು ತೆಗೆಸುತ್ತಿದ್ದರು. ಹಿಟಾಚಿ ಬಳಸಿ 15 ರಿಂದ 20 ಅಡಿಯಷ್ಟು ಮಣ್ಣು ತೆಗೆದಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದರು.
ಈ ಹಿನ್ನಲೆ ತಹಶೀಲ್ದಾರ್ ನೇತೃತ್ವದಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸಿದರು. ಗುತ್ತಿಗೆದಾರ ಮೀನುಗಾರಿಕೆ ಇಲಾಖೆಯಿಂದ ಮೀನು ಸಾಕಾಣಿಕೆಗೆ ಅನುಮತಿ ಪಡೆದಿದ್ದರು. ಆದರೆ ಮೀನು ಸಾಕುವ ಬದಲು ಕೆರೆಯ ನೀರನ್ನು ಖಾಲಿ ಮಾಡಲು ಮತ್ತು ಮಣ್ಣು ತೆಗೆಸುತ್ತಿದ್ದರು. ಇದಕ್ಕೆ ಯಾವುದೆ ಅನುಮತಿ ಪಡೆದಿರಲಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ. ಹಾಗಾಗಿ ಸರ್ಕಾರಕ್ಕೆ 28 ಲಕ್ಷ ರೂ. ನಷ್ಟವಾಗಿದೆ ಎಂದು ಆರೋಪಿಸಲಾಗಿದೆ.
ALSO READ – ರೈಲ್ವೆ ನಿಲ್ದಾಣ ಬಳಿ ದರೋಡೆಗೆ ಪ್ಲಾನ್, ತಲ್ವಾರ್, ರಾಡ್, ಖಾರದ ಪುಡಿ ಸಹಿತ ಸಿಕ್ಕಿಬಿದ್ದ ಟೀಮ್
ಪ್ರಕರಣ ಸಂಬಂಧ ಒಂದು ಹಿಟಾಚಿ ಯಂತ್ರ, ಏಳು ಲಾರಿ, ಒಂದು ಟ್ರಾಕ್ಟರನ್ನು ವಶಕ್ಕೆ ಪಡೆಯಲಾಗಿದೆ. ಭದ್ರಾವತಿ ಕಸಬ ಹೋಬಳಿ ರಾಜಸ್ವ ನಿರೀಕ್ಷಕ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಗುತ್ತಿಗೆದಾರನ ವಿರುದ್ಧ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.