ಶಿವಮೊಗ್ಗ ಲೈವ್.ಕಾಂ | SHIMOGA NEWS | 5 ಅಕ್ಟೋಬರ್ 2020
ವಿದ್ಯುತ್ ಕಂಪನಿಗಳ ಖಾಸಗೀಕರಣಕ್ಕೆ ವಿರೋಧ ಮತ್ತು ಉತ್ತರ ಪ್ರದೇಶದ ಇಂಧನ ಇಲಾಖೆ ನೌಕರರ ಪ್ರತಿಭೆಟನೆಗೆ ಬೆಂಬಲ ಸೂಚಿಸಿ ಶಿವಮೊಗ್ಗ KPTCL ಸಿಬ್ಬಂದಿ ಪ್ರತಿಭಟನೆ ನಡೆಸಿದರು.
ಶಿವಮೊಗ್ಗ ಕೇಂದ್ರ ರೈಲ್ವೆ ನಿಲ್ದಾಣ ಬಳಿಯ ಮೆಸ್ಕಾಂ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಲಾಯಿತು. ಖಾಸಗೀಕರಣದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಸಿಬ್ಬಂದಿ, ವಿದ್ಯತ್ ಬಿಲ್ ವಿರುದ್ಧ ಘೋಷಣೆ ಕೂಗಿದರು.
ಹತ್ತು ನಿಮಿಷದ ಸಾಂಕೇತಿಕ ಪ್ರತಿಭಟನೆ
ವಿದ್ಯುತ್ ಬಿಲ್ ವಿರೋಧಿಸಿ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಲಾಯಿತು. ಕೆಲಸ ಆರಂಭಕ್ಕೂ ಮುನ್ನ ಮೆಸ್ಕಾಂನ ಎಲ್ಲಾ ಸಿಬ್ಬಂದಿಗಳು ಹತ್ತು ನಿಮಿಷ ಪ್ರತಿಭಟನೆ ನಡೆಸಿದರು. ಬಳಿಕ ಎಲ್ಲರೂ ಕೆಲಸಕ್ಕೆ ಹಾಜರಾದರು.
ಸಂಘಟನಾ ಕಾರ್ಯದರ್ಶಿ ಎಸ್.ಪಿ.ಮೋಹನ್ ಕುಮಾರ್, ಅಧೀಕ್ಷಕ ಎಂಜಿನಿಯರುಗಳಾದ ಶಶಿಧರ್, ವೆಂಕಟೇಶ್ ಪ್ರಸಾದ್, ಕಾರ್ಯನಿರ್ವಾಹಕ ಎಂಜಿನಿಯರ್ ವೀರೇಂದ್ರ, ಪ್ರಮುಖರಾದ ಯೋಗೇಶ್, ವಂಸತಕುಮಾರ್, ಅಣ್ಣಪ್ಪ ಸೇರಿದಂತೆ ಹಲವು ನೌಕರರು ಪ್ರತಿಭಟನೆಯಲ್ಲಿದ್ದರು.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]