SHIVAMOGGA LIVE NEWS | 26 JANUARY 2023
SHIMOGA| ಬಡವರ ಬಂಧು ಎಂದು ಹೇಳಿಕೊಳ್ಳುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಳಸುವ ಎಲ್ಲಾ ವಸ್ತುಗಳು ವಿದೇಶದ್ದು. ಬೆಸ್ಟ್ ಇಂಪೋರ್ಟೆಡ್ (imported) ವಸ್ತುಗಳೆ ಅವರಿಗೆ ಬೇಕು ಎಂದು ಉನ್ನತ ಶಿಕ್ಷಣ ಸಚಿವ ಡಾ.ಅಶ್ವಥ ನಾರಾಯಣ ವ್ಯಂಗ್ಯ ಮಾಡಿದರು.
ಗಾಂಧಿ ಬಜಾರ್ ಶ್ರೀ ಬಸವೇಶ್ವರ ದೇವಾಲಯದಲ್ಲಿ ಬಿಜೆಪಿ ವಿಜಯ ಸಂಕಲ್ಪ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಎಲ್ಲವು ಫಾರಿನ್ ವಸ್ತುಗಳು
ಸಿದ್ದರಾಮಯ್ಯ ಅವರು ಈ ಹಿಂದೆ ದುಬಾರಿ ವಾಚ್ ಬಳಸಿದ್ದು ದೊಡ್ಡ ಸುದ್ದಿಯಾಗಿತ್ತು. ಆ ಬಗ್ಗೆ ಕೇಳಿದಾಗ ಯಾರೋ ಕೊಟ್ಟಿದ್ದು ಎಂದು ಹೇಳಿದ್ದರು. ಕುಮಾರಸ್ವಾಮಿ ಅವರು ಈ ವಾಚ್ ಕಳ್ಳತನದ ಮಾಲಾ? ಕದ್ದಿದ್ದಾ? ಕೊಟ್ಟಿದ್ದಾ ಎಂದು ಕೇಳಿದಾಗ ಉತ್ತರಿಸಿಲು ಸಿದ್ದರಾಮಯ್ಯ ಅವರು ಸಮಯ ತೆಗೆದುಕೊಂಡಿದ್ದರು. ವಾಚಿನ ಬಿಲ್ ಕೊಡಲು ವರ್ಷವೆ ಬೇಕಾಯಿತು ಎಂದು ಲೇವಡಿ ಮಾಡಿದರು.
ಬಡವರ ಬಂಧು ಎಂದು ಹೇಳಕೊಳ್ಳುವ ಸಿದ್ದರಾಮಯ್ಯ ಅವರಿಗೆ ಬಳಸಲು ವಿದೇಶದ ವಸ್ತುಗಳೇ ಬೇಕು. ಅವರು ಬಳಸುವ ಕನ್ನಡಕ, ವಾಚು ಎಲ್ಲವು ಬೆಸ್ಟ್ ಇಂಪೋರ್ಟೆಡ್ (imported) ವಸ್ತುಗಳೆ ಎಂದು ಡಾ.ಅಶ್ವಥ ನಾರಾಯಣ ಹೇಳಿದರು.
ಬಿಜೆಪಿ ಅವಧಿಯಲ್ಲಿ ಅಭಿವೃದ್ಧಿ ಪರ್ವ
ಬಿಜೆಪಿ ಸರ್ಕಾರದ ಅವಧಿಯಲ್ಲಿ ರಾಜ್ಯದಲ್ಲಿ ಅಭಿವೃದ್ಧಿ ಪರ್ವವೆ ನಡೆದಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಾರ್ಯಗಳನ್ನು ಜನರು ಮೆಚ್ಚಿಕೊಂಡಿದ್ದಾರೆ. ಮುಂದಿನ ಬಾರಿಯು ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಸಂಸದ ಬಿ.ವೈ.ರಾಘವೇಂದ್ರ, ವಿಧಾನ ಪರಿಷತ್ ಸದಸ್ಯರಾದ ಆಯನೂರು ಮಂಜುನಾಥ್, ಎಸ್.ರುದ್ರೇಗೌಡ, ಡಿ.ಎಸ್.ಅರುಣ್ ಸೇರಿದಂತೆ ಹಲವರು ಇದ್ದರು.
ಇದನ್ನೂ ಓದಿ – ಶಿವಮೊಗ್ಗದಲ್ಲಿ JOB FAIR, ಇನ್ಫೋಸಿಸ್, ಬೆಂಗಳೂರು ಏರ್ ಪೋರ್ಟ್ ಸೇರಿ 40ಕ್ಕೂ ಹೆಚ್ಚು ಕಂಪನಿ ಭಾಗಿ, ನೋಂದಣಿ ಶುರು