ಶಿವಮೊಗ್ಗ ಲೈವ್.ಕಾಂ | SORABA NEWS | 25 ಆಗಸ್ಟ್ 2020
ಕೃಷಿ ಸಚಿವರೆ ಸ್ವತಃ ಬೆಳೆ ಸಮೀಕ್ಷೆ ನಡೆಸಿದ್ದಾರೆ. ಸೊರಬ ತಾಲೂಕಿನ ಯಲವಾಳ ಗ್ರಾಮದಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ್ ಸ್ವತಃ ಬೆಳೆ ಸಮೀಕ್ಷೆ ನಡೆಸಿದರು.
ಮೊಬೈಲ್ ಆಪ್ ಮೂಲಕ ಸಮೀಕ್ಷೆ
ಯಲವಾಳ ಮತ್ತು ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕು ಚಿಕ್ಕಕೊಣತಿ ಗ್ರಾಮದಲ್ಲಿ ಸಚಿವ ಬಿ.ಸಿ.ಪಾಟೀಲ್ ಬೆಳೆ ಸಮೀಕ್ಷೆ ನಡೆಸಿದರು. ಮೊಬೈಲ್ ಆಪ್ ಮೂಲಕ ಬೆಳೆ ಸಮೀಕ್ಷೆ ನಡೆಸಲಾಯಿತು.
ಸಮೀಕ್ಷೆ ಅವಧಿ ವಿಸ್ತರಣೆ
ಇದೇ ವೇಳೆ ಮಾತನಾಡಿದ ಸಚಿವ ಬಿ.ಸಿ.ಪಾಟೀಲ್, ಮೊಬೈಲ್ ಆಪ್ ಮೂಲಕ ರೈತರು ತಮ್ಮ ಹೊಲದ ಸಮೀಕ್ಷೆಯನ್ನು ಸ್ವತಃ ತಾವೆ ನಡೆಸಬಹುದಾಗಿದೆ. ರೈತರಿಂದ ಅಭೂತಪೂರ್ವ ಸ್ಪಂದನೆ ಇದೆ. ಈ ಸಮೀಕ್ಷೆಗೆ ಆ.24ರವರೆಗೆ ನಿಗದಿಗೊಳಿಸಿದ್ದ ಅವಧಿಯನ್ನು ವಿಸ್ತರಿಸಲಾಗಿದೆ. ಕೇಂದ್ರ ಸರ್ಕಾರವು ಈ ಮೊಬೈಲ್ ಆಪ್ನಿಂದ ಪ್ರೇರಿತವಾಗಿದೆ ಎಂದರು.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]