ಶಿವಮೊಗ್ಗ ಲೈವ್.ಕಾಂ | SHIMOGA NEWS | 1 ಸೆಪ್ಟೆಂಬರ್ 2021
ಪಿಎಸ್ಐ ಹುದ್ದೆಯ ದೈಹಿಕ ಪರೀಕ್ಷೆಯ ಸಿದ್ಧತೆಗಾಗಿ ನೆಹರೂ ಸ್ಟೇಡಿಯಂಗೆ ಬಂದಿದ್ದ ಯುವತಿಯ ಮೊಬೈಲ್ ಮತ್ತು ನಗದು ಕಳುವಾಗಿದೆ. ಈ ಸಂಬಂಧ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹರ್ಷಿತಾ ಎಂಬುವವರಿಗೆ ಸೇರಿದ 32 ಸಾವಿರ ರೂ. ಮೌಲ್ಯದ ಮೊಬೈಲ್ ಮತ್ತು 2 ಸಾವಿರ ರೂ. ನಗದು ಕಳ್ಳತನವಾಗಿದೆ.
ಹೇಗಾಯ್ತು ಘಟನೆ?
ಪಿಎಸ್ಐ ಹುದ್ದೆಯ ದೈಹಿಕ ಪರೀಕ್ಷೆಯ ಸಿದ್ಧತೆಗಾಗಿ ಹರ್ಷಿತಾ ಅವರು ಆಗಸ್ಟ್ 24ರ ಸಂಜೆ ತಮ್ಮ ಸ್ನೇಹಿತೆರೊಂದಿಗೆ ನೆಹರೂ ಸ್ಟೇಡಿಯಂಗೆ ಬಂದಿದ್ದರು. ಎಲ್ಲರಂತೆ ತಾವು ಕೂಡ ಬ್ಯಾಗನ್ನು ಪೆವಿಲಿಯನ್’ನಲ್ಲಿ ಇರಿಸಿದ್ದರು. ಸಿದ್ಧತೆ ಪೂರ್ಣಗೊಳಿಸಿ ಪೆವಿಲಿಯನ್ ಕಡೆಗೆ ಬಂದಾಗ ಬ್ಯಾಗ್ ನಾಪತ್ತೆಯಾಗಿತ್ತು.
ಬ್ಯಾಗಿನಲ್ಲಿ ಮೊಬೈಲ್ ಹಾಗು ನಗದು ಇತ್ತು. ಈ ಸಂಬಂಧ ದೂರು ನೀಡಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
(ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ ಈ ಮೇಲ್ ಮಾಡಬಹುದು)
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200