ಶಿವಮೊಗ್ಗದ ಲೈವ್.ಕಾಂ | RIPPONPETE NEWS | 24 ಡಿಸೆಂಬರ್ 2021
ಚಾಕುವಿನಿಂದ ಇರಿದು ವ್ಯಕ್ತಿಯೊಬ್ಬನನ್ನು ಕೊಲೆಗೈದು, ಮೃತದೇಹವನ್ನು ಸಮೀಪದ ಕೆರೆಗೆ ಹಾಕಲಾಗಿದೆ. ಹೊಸನಗರ ತಾಲೂಕು ರಿಪ್ಪನ್’ಪೇಟೆ ಸಮೀಪದ ಗರ್ತಿಕೆರೆಯಲ್ಲಿ ಘಟನೆ ಸಂಭವಿಸಿದೆ.
ಅವುಕ ರಸ್ತೆಯ ನಿವಾಸಿ ಸತೀಶ್ ಶೆಟ್ಟಿ (55) ಕೊಲೆಯಾದ ವ್ಯಕ್ತಿ. ಗರ್ತಿಕೆರೆ ಕೆಳಗಿನ ಕೆರೆಯಲ್ಲಿ ಮೃತದೇಹ ಪತ್ತೆಯಾಗಿದೆ. ಶವವನ್ನು ಮೇಲತ್ತಿದಾಗ ಸತೀಶ್ ಶೆಟ್ಟಿ ಎಂದು ಗುರುತಿಸಲಾಗಿದೆ. ಚಾಕುವಿನಿಂದ ಇರಿದು ಹತ್ಯೆ ಮಾಡಿರುವುದು ಗೊತ್ತಾಗಿದೆ.
ಕೊಲೆಗೆ ಕಾರಣ ತಿಳಿದುಬಂದಿಲ್ಲ. ಸ್ಥಳಕ್ಕೆ ಹೊಸನಗರ ಸಿಪಿಐ ಮಧುಸೂದನ್ ಭೇಟಿ ನೀಡಿ ಪರಿಶೀಲಿಸಿದರು. ರಿಪ್ಪನ್ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.