ಶಿವಮೊಗ್ಗ ಲೈವ್.ಕಾಂ | SHIMOGA | 6 ಫೆಬ್ರವರಿ 2020
ಶಿವಮೊಗ್ಗದ ಗೋಪಾಳದಲ್ಲಿ ವ್ಯಕ್ತಿಯೊಬ್ಬನಿಗೆ ಚಾಕು ಇರಿದು ಹತ್ಯೆ ಮಾಡಲಾಗಿದೆ. ಜನನಿಬಿಡ ಪ್ರದೇಶದಲ್ಲೇ ನಡು ರಸ್ತೆಯಲ್ಲೇ ಕೊಲೆಗೈಯ್ಯಲಾಗಿದೆ.
ಗಿರೀಶ್ (33) ಹತ್ಯೆಯಾದವನು. ಗೊಪಾಳದ ಸಿದ್ದೇಶ್ವರ ಸರ್ಕಲ್ ಬಳಿ ಘಟನೆ ನಡೆದಿದೆ. ಸಂಜೆ ಗಿರಿ ಮೇಲೆ ದಾಳಿ ನಡೆಸಿದ ಯುವಕರು, ಎದೆ ಭಾಗಕ್ಕೆ ಚಾಕು ಇರಿದಿದ್ದಾರೆ. ಗಿರೀಶ್’ನನ್ನು ಕೂಡಲೇ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತು.
ಚಿಕಿತ್ಸೆ ಫಲಕಾರಿ ಆಗದೆ ಗಿರೀಶ್ ಮೃತಪಟ್ಟಿದ್ದಾನೆ. ತುಂಗಾ ನಗರ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
ಈ ಮೇಲ್ ಐಡಿ | [email protected]