SHIVAMOGGA LIVE | 4 JUNE 2023
SHIMOGA : ಬಸ್ಸು, ರೈಲಿನಲ್ಲಿ ಪ್ರಯಾಣದ ವೇಳೆ ಪದೇ ಪದೆ ಜೇಬಿನಲ್ಲಿರುವ ಪರ್ಸ್ ಮುಟ್ಟಿ ನೋಡುತ್ತೇವೆ. ಅದೆ ರೀತಿ ಕುವೆಂಪು, ತೇಜಸ್ವಿ (Tejaswi), ಶಾಮಣ್ಣನವರ ಬದುಕಿನ ಮೌಲ್ಯಗಳನ್ನು ಓದಿ ಪುನಶ್ಚೇತನ ಮಾಡಬೇಕು ಎಂದು ಸಾಹಿತಿ ಜಯಂತ್ ಕಾಯ್ಕಿಣಿ ತಿಳಿಸಿದರು.
ಕುವೆಂಪು ರಂಗಮಂದಿರಲ್ಲಿ ಬಹುಮುಖಿ ವೇದಿಕೆ ಸಹಯೋಗದಲ್ಲಿ ಲೇಖಕ ಕಡಿದಾಳ್ ಪ್ರಕಾಶ್ ಅವರ ನಾ ಕಂಡಂತೆ ತೇಜಸ್ವಿ – ಶಾಮಣ್ಣ ಪುಸ್ತಕ (Tejaswi) ಬಿಡುಗಡೆ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜಯಂತ್ ಕಾಯ್ಕಿಣಿ ಏನೇನೆಲ್ಲ ಹೇಳಿದರು?
ಕೃಪಾಕರ ಸೇನಾನಿ ಹೇಳಿದ ಕಥೆ
ಪ್ರಸಿದ್ಧ ವನ್ಯಜೀವಿ ಛಾಯಾಗ್ರಾಹಕರಾದ ಕೃಪಾಕರ ಮತ್ತು ಸೇನಾನಿ ಅವರು ನಾ ಕಂಡಂತೆ ತೇಜಸ್ವಿ ಶಾಮಣ್ಣ ಪುಸ್ತಕ ಬಿಡುಗಡೆ ಮಾಡಿದರು. ಬಳಿಕ ಮಾತನಾಡಿದ ಅವರು ತೇಜಸ್ವಿ ಮತ್ತು ಶಾಮಣ್ಣ ಅವರ ಜೀವನದ ಕೆಲವು ಪ್ರಮುಖ ವಿದ್ಯಮಾನಗಳನ್ನು ಸ್ಮರಿಸಿದರು.
ಕೃಪಾಕರ ಅವರು ಮತನಾಡಿ, ಮುಖ್ಯಮಂತ್ರಿ ಕಡಿದಾಳು ಮಂಜಪ್ಪ ಅವರು ತಮ್ಮ ಮನೆಯಲ್ಲಿ ಅದ್ಧೂರಿ ವಿವಾಹ ಸಮಾರಂಭ ಆಯೋಜಿಸಿದ್ದರು. ಮದುವೆ ಮನೆ ಮುಂದೆ ಕಡಿದಾಳ್ ಶಾಮಣ್ಣ ಅವರು ಎಲ್ಲರಿಗು ಕರಪತ್ರ ಹಂಚಿದ್ದರು. ಆ ಕರಪತ್ರದಲ್ಲಿ ಸರಳ ವಿವಾಹದ ಸಂದೇಶವಿತ್ತು. ಇದನ್ನು ಸೇನಾನಿ ಅವರ ತಾಯಿ ನನಗೆ ತಿಳಿಸಿದ್ದರು ಎಂದರು.
ಸೇನಾನಿ ಅವರು ಮಾತನಾಡಿ, ರೈತ ಸಂಘ ಸ್ಥಾಪನೆಯಾದಾಗ ಹಸಿರು ಶಾಲು ಕೊಟ್ಟವರು ಶಾಮಣ್ಣ. ಒಮ್ಮೆ ತೇಜಸ್ವಿ ಮತ್ತು ಶಾಮಣ್ಣ ಅವರು ದೆವ್ವ ಹುಡುಕಲು ಹೊರಟಿದ್ದರು. ದೆವ್ವ ತಮ್ಮಿಬ್ಬರ ರೂಪದಲಿಯೇ ಬಂದು ತಮ್ಮನ್ನೆ ಯಾಮಾರಿಸಿಬಿಟ್ಟರೆ ಎಂಬ ಗೊಂದಲಕ್ಕೆ ಬಿದ್ದರು. ಆಗ ಶಾಮಣ್ಣ ಒಂದು ಚೀನಿ ಭಾಷೆಯ ಕೋಡ್ ವರ್ಡ್ ಹೇಳಿದ್ದರು. ಆ ಪದ ಸರಿಯಾಗಿ ಉಚ್ಛರಿಸಲಾಗದೆ ತೇಜಸ್ವಿ ಪೇಚಿಗೆ ಸಿಲುಕಿದ್ದರು ಎಂದು ದೆವ್ವ ಹುಡುಕಾಟದ ಪ್ರಸಂಗ ನೆನಪಿಸಿದರು.
ಸಮಾರಂಭದ ಬಳಿಕ ಸಂವಾದ ನಡೆಯಿತು. ಸಾಹಿತಿ ಪುಟ್ಟಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಲೇಖಕ ಕಡಿದಾಳ್ ಪ್ರಕಾಶ್, ಕಮಲಾ ನೆಹರೂ ಕಾಲೇಜು ಪ್ರಾಚಾರ್ಯ ಡಾ. ಹೆಚ್.ಎಸ್.ನಾಗಭೂಷಣ್ ಅವರು ವೇದಿಕೆಯಲ್ಲಿದ್ದರು.
ಇದನ್ನೂ ಓದಿ – ಗಂಭೀರ ಸ್ಥಿತಿಗೆ ತಲುಪಿದ್ದ ಶಿವಮೊಗ್ಗದ ಸ್ನೇಕ್ ಕಿರಣ್ ಈಗ ಹೇಗಿದ್ದಾರೆ? ಆ ದಿನ ಹಾವು ಕಚ್ಚಿದ್ದು ಹೇಗೆ?
WATCH VIDEO
ಹೆಚ್ಚಿನ ಮಾಹಿತಿಗೆ ಇಲ್ಲಿ CLICK ಮಾಡಿ