ಶಿವಮೊಗ್ಗ ಲೈವ್.ಕಾಂ | BHADRAVATHI NEWS | 28 ನವೆಂಬರ್ 2021
ಪಾನಿಪೂರಿ ಸೇವಿಸಿ ಅಸ್ವಸ್ಥರಾಗಿ ಚಿಕಿತ್ಸೆ ಪಡೆದವರ ಕುರಿತು ಮಾಹಿತಿ ಸಂಗ್ರಹಿಸಿ, ಪರಿಶೀಲನೆ ನಡೆಸಿ, ತಿಳಿವಳಿಕೆ ನೀಡಲು ಭದ್ರಾವತಿ ನಗರಸಭೆ ಅಧಿಕಾರಿಗಳು ಇವತ್ತು ಅಪ್ಪರ್ ಹುತ್ತಾ ಬಡಾವಣೆಗೆ ಭೇಟಿ ನೀಡಿದ್ದರು. ಶಿವಮೊಗ್ಗ ಲೈವ್.ಕಾಂ ವರದಿ ಬೆನ್ನಿಗೆ ಅಧಿಕಾರಿಗಳು ಅಪ್ಪರ್ ಹುತ್ತಾಗೆ ತೆರಳಿದ್ದಾರೆ.
ನಗರಸಭೆ ಆರೋಗ್ಯಾಧಿಕಾರಿ ಸತೀಶ್, ಆಶಾಲತಾ, ಆಶ್ರಯ ಸಮಿತಿ ಸದಸ್ಯ ಸತೀಶ್ ಅವರು ಬಡಾವಣೆಯಲ್ಲಿ ಪರಿಶೀಲನೆ ನಡೆಸಿದರು.
ತೆರೆದುಕೊಂಡಿತು ಪಾನಿಪೂರಿಯ ಕಾರಳತೆ
ಪಾನಿಪೂರಿ ಸೇವಿಸಿ ಅಸ್ವಸ್ಥರಾದವರಲ್ಲಿ ಮಕ್ಕಳ ಸಂಖ್ಯೆ ಹೆಚ್ಚು. ಖಾಸಗಿ ಶಾಲೆಯ ಮಕ್ಕಳು ಮಧ್ಯಾಹ್ನದ ವೇಳೆ ಪಾನಿಪೂರಿ ಸೇವಿಸಿದ್ದರು. ಆರೋಗ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಈ ವಿಚಾರ ಬೆಳಕಿಗೆ ಬಂದಿದೆ. ಎಲ್ಲರ ಆರೋಗ್ಯದ ಕುರಿತು ಅಧಿಕಾರಿಗಳು ಮಾಹಿತಿ ಪಡೆದರು.
ಇದನ್ನೂ ಓದಿ | ಪಾನಿಪೂರಿ ತಿಂದ ಹಲವರು ಅಸ್ವಸ್ಥ, ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ಮನೆಗೆ, ದೂರು ನೀಡಲು ಹಿಂದೇಟು
ಇನ್ನು, ಬಡಾವಣೆಯಲ್ಲಿ ಶುಚಿತ್ವ ಕಾಪಾಡುವುದು, ಬೀದಿ ಬದಿಯ ತಿಮಡಿ, ತಿನಿಸುಗಳನ್ನು ಸೇವಿಸುವಾಗ ಎಚ್ಚರ ವಹಿಸುವಂತೆ ಅಧಿಕಾರಿಗಳು ತಿಳಿವಳಿಕೆ ನೀಡಿದರು. ಈ ವೇಳೆ ಖಾಸಗಿ ಶಾಲಯ ಪ್ರಾಂಶುಪಲಾರು, ಸಿಬ್ಬಂದಿ ಕೂಡ ಹಾಜರಿದ್ದರು.
ಪಾನಿಪೂರಿ ಸೇವಿಸ ಹಲವರು ಅಸ್ವಸ್ಥರಾಗದ ಬಗ್ಗೆ ಶಿವಮೊಗ್ಗ ಲೈವ್.ಕಾಂ ವರದಿ ಮಾಡಿತ್ತು. ಇದರ ಬೆನ್ನಿಗೆ ಅಧಿಕಾರಿಗಳು ಭೇಟಿ ನೀಡಿ, ಮಾಹಿತಿ ಸಂಗ್ರಹಿಸಿದ್ದಾರೆ.