ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಶಿವಮೊಗ್ಗ ಲೈವ್.ಕಾಂ | SHIMOGA | 11 ಡಿಸೆಂಬರ್ 2019
ಹೊಸ ವರ್ಷದ ಸ್ವಾಗತಕ್ಕೆ ಶಿವಮೊಗ್ಗದಲ್ಲಿ ಭರ್ಜರಿ ಸಿದ್ಧತೆ ನಡೆಯುತ್ತಿದೆ. ಇದೇ ಮೊದಲ ಬಾರಿಗೆ ಶಿವಮೊಗ್ಗ ಸಿಟಿಯಲ್ಲಿ ಅತಿ ದೊಡ್ಡ ಸೆಲಬ್ರಿಟಿ ಶೋ ಆಯೋಜಿಸಲಾಗುತ್ತಿದೆ. ಸ್ಯಾಂಡಲ್’ವುಡ್, ಬಾಲಿವುಡ್ ಮತ್ತು ಅಂತಾರಾಷ್ಟ್ರೀಯ ಮಟ್ಟದ ಸೆಲಬ್ರಿಟಿಗಳು ಈ ಶೋನಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
CKDC ಇಂಟರ್’ನ್ಯಾಷನಲ್, AOM ಹೊಟೇಲ್ಸ್ ಮತ್ತು NRC ಸ್ಪೋರ್ಟ್ಸ್ ಪ್ಯಾರಡೈಸ್ ವತಿಯಿಂದ ಗ್ರ್ಯಾಂಡ್ ನ್ಯೂ ಇಯರ್ ಸೆಲಬ್ರೇಷನ್ ಆಯೋಜಿಸಲಾಗಿದೆ.
ಭಾಗವಹಿಸುತ್ತಿದ್ದಾರೆ ಭರ್ಜರಿ ಸೆಲಬ್ರಿಟಿಗಳು
ಜೀ ಕನ್ನಡದ ಕಾಮಿಡಿ ಕಿಲಾಡಿಗಳು ಫೇಮ್’ನ ನಯನಾ, ಅಪ್ಪಣ್ಣ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ. ಜೀ ಕನ್ನಡದ ಸರಿಗಮಪ ಕಾರ್ಯಕ್ರಮದ ವಿಜೇತರಾದ ಸುನಿಲ್ ಮತ್ತು ಸುಹಾನಾ ಸಯ್ಯದ್ ಅವರಿಂದ ಮ್ಯೂಜಿಕಲ್ ಕಾನ್ಸರ್ಟ್ ಇರಲಿದೆ. ಡಿಜೆ ಲಯಾತಾಲ್ ಅವರಿಂದ ಡಿಜೆ ನೈಟ್ಸ್ ನಡೆಯಲಿದೆ.

ಯುರೋಪ್’ನ ಹಂಗೇರಿಯಿಂದ ಅಂತಾರಾಷ್ಟ್ರೀಯ ಮಟ್ಟದ ಡಾನ್ಸರ್ ಅಡ್ರೇನ್ ಇಸೆಪ್ಸಿ ಮತ್ತವರ ಟೀಂನಿಂದ ಡಾನ್ಸ್ ಪರ್ಫಾಮೆನ್ಸ್ ನಡೆಯಲಿದೆ. ಬಾಲಿವುಡ್ ಡಾನ್ಸ್ ಗ್ರೂಪ್’ನಿಂದ ಬೆಲ್ಲಿ ಡಾನ್ಸ್ ಆಯೋಜಿಸಲಾಗಿದೆ. ಸಮಾರಂಭದಲ್ಲಿ ಭಾಗಿಯಾದವರಿಗೂ ಭರ್ಜರಿ ಸ್ಟೆಪ್ಸ್ ಹಾಕುವ ಅವಕಾಶವಿದೆ.
ನಾಲಗೆ ಚಪ್ಪರಿಸೋಕೆ ಭರ್ಜರಿ ಊಟ
ನ್ಯೂ ಇಯರ್ ಸೆಲಬ್ರೇಷನ್’ನಲ್ಲಿ ಪಾಲ್ಗೊಳ್ಳುವವರಿಗೆ ಸಸ್ಯಹಾರಿ ಮತ್ತು ಮಾಂಸಹಾರಿ ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ಕಾರ್ಯಕ್ರಮದ ಆಯೋಜಕರು ತಿಳಿಸಿದ್ದಾರೆ. ಆಲ್ಕೋಹಾಲ್ ಮತ್ತು ನಾನ್ ಆಲ್ಕೋಹಾಲ್ ಬೀವರೇಜ್ ವ್ಯವಸ್ಥೆಯು ಇದೆ. ನಿದಿಗೆ ಕೆರೆಯಲ್ಲಿ ಕಾರ್ಯಕ್ರಮ ನಡೆಯುತ್ತಿರುವುದರಿಂದ, ಲೇಕ್ ವಿವ್ ಪಾರ್ಟಿ, ವಿವಿಐಪಿ ಫ್ಲೋಟಿಂಗ್ ಲಾಂಜ್, ಕಿಡ್ಸ್ ಪ್ಲೇ ಏರಿಯಾ ಸ್ಥಾಪಿಸಲಾಗಿದೆ. ಇನ್ನು, ಕಾರ್ಯಕ್ರಮಕ್ಕೆ ಸೂಕ್ತ ಸೆಕ್ಯೂರಿಟಿ ಮತ್ತು ತುರ್ತು ಸಂದರ್ಭಕ್ಕಾಗಿ ಮೆಡಿಕಲ್ ವ್ಯವಸ್ಥೆ ಮಾಡಲಾಗಿದೆ.

ನಿದಿಗೆಯ ಚುಂಚಾದ್ರಿ ವಾಟರ್ ಸ್ಪೋರ್ಟ್ಸ್ ಕ್ಲಬ್’ನ ಲೇಕ್ ವಿವ್ ರೆಸ್ಟೋರೆಂಟ್’ನಲ್ಲಿ ಕಾರ್ಯಕ್ರಮ ನಡೆಯಲಿದೆ.

ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದಲ್ಲಿ ನಡೆಯುತ್ತಿರುವ ಅತಿ ದೊಡ್ಡ ನ್ಯೂ ಇಯರ್ ಸೆಲಬ್ರೇಷನ್ ಇದು. ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳೋಕೆ ರಿಜಿಸ್ಟ್ರೇಷನ್ ಮಾಡಿಕೊಳ್ಳಬೇಕಿದೆ. ಈ ಕೂಡಲೆ ರಿಜಿಸ್ಟರ್ ಮಾಡಿಕೊಳ್ಳಲು ಈ ನಂಬರ್’ಗೆ ಕರೆ ಮಾಡಿ ಬುಕ್ಕಿಂಗ್ ಮಾಡಿಕೊಳ್ಳಬಹುದು. 6362690851, 7760119075, 7019659388, 9663121993. ಇನ್ನು ವಾಟ್ಸಪ್ ಮೂಲಕವೂ ಬುಕ್ಕಿಂಗ್ ಕುರಿತು ಮಾಹಿತಿ ಪಡೆಯಲು 8553253689

LATEST NEWS
- ಆಲ್ಕೊಳ ಬಳಿ ಪೊಲೀಸರ ಕಾರ್ಯಾಚರಣೆ, ಬೈಕ್ ಸಹಿತ ಇಬ್ಬರು ಅರೆಸ್ಟ್, ಕಾರಣವೇನು?

- ಶರಾವತಿ ನಗರದಲ್ಲಿ ಕಾರು ಗಾಜು ಪೀಸ್ ಪೀಸ್ ಕೇಸ್, ಮೂವರು ಅರೆಸ್ಟ್, ಘಟನೆಗೆ ಕಾರಣ ಮನೆ

- ಶಿವಮೊಗ್ಗದಲ್ಲಿ ಏರ್ಟೆಲ್ ಮೊಬೈಲ್ ಟವರ್ನ ಉಪಕರಣ ಕಳವು, ಆಗಿದ್ದೇನು?

- ಶಿವಮೊಗ್ಗ ಕಾಂಗ್ರೆಸ್ ಕಾರ್ಯದರ್ಶಿ ಸೇರಿ ಇಬ್ಬರು 6 ವರ್ಷ ಪಕ್ಷದಿಂದ ಉಚ್ಛಾಟನೆ, ಕಾರಣವೇನು?

- ಬೇಡರ ಹೊಸಹಳ್ಳಿ ಬಳಿ ಚಲಿಸುತ್ತಿದ್ದ ಬಸ್ಸಿನ ಸೀಟಿನಿಂದಲೇ ಹೊರಗೆ ಬಿದ್ದ ಪ್ರಯಾಣಿಕ

About The Editor
ನಿತಿನ್ ಆರ್.ಕೈದೊಟ್ಲು





