ಎಲೆಕ್ಷನ್ ಮುಗಿಯೋವರೆಗೆ ಮೌನಕ್ಕೆ ಶರಣು, ಸ್ಥಾಯಿ ಸಮಿತಿ ಸದಸ್ಯತ್ವ ಬೇಡ ಅಂದ್ರು, ದೂರದಲ್ಲೇ ನಿಂತು ಸಂಭ್ರಮ ಕಣ್ತುಂಬಿಕೊಂಡ್ರು

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ ಲೈವ್.ಕಾಂ | SHIMOGA | 29 ಜನವರಿ 2020

2019 readers copy new

ಸ್ಥಾಯಿ ಸಮಿತಿ ಸದಸ್ಯತ್ವ ಬೇಡವೇ ಬೇಡ ಅಂದರು..! ಚುನಾವಣೆ ಪ್ರಕ್ರಿಯೆ ಮುಗಿಯೋವರೆಗು ಮೌನವಾಗಿ ಕುಳಿತರು..! ವೇದಿಕೆ ಕೆಳಗೆ ನಿಂತು ವಿಷ್ ಮಾಡುತ್ತಿದ್ದವರನ್ನು ವೇದಿಕೆಗೆ ಎಳೆದೊಯ್ದ ನಿರ್ಗಮಿತ ಉಪ ಮೇಯರ್..!

83647638 1040944329600320 7206736302694203392 o.jpg? nc cat=104& nc ohc=UlXVePbk0XEAX9SQuAo& nc ht=scontent.fblr11 1

ಮೇಯರ್ ಸ್ಥಾನದ ಪ್ರಬಲ ಆಕಾಂಕ್ಷಿ ಅನಿತಾ ರವಿಶಂಕರ್, ಚುನಾವಣೆ ಪ್ರಕ್ರಿಯೆ ಮುಗಿಯುವವರೆಗು ಮೌನಕ್ಕೆ ಶರಣಾಗಿದ್ದರು. ಮೇಯರ್ ಸ್ಥಾನದ ಚುನಾವಣೆಗೆ ಸ್ಪರ್ಧಿಸಲು ಸುವರ್ಣ ಶಂಕರ್ ಅವರಿಗೆ ಪಕ್ಷ ಗ್ರೀನ್ ಸಿಗ್ನಲ್ ನೀಡಿತು. ಇದು ಅನಿತಾ ರವಿಶಂಕರ್ ಅವರಿಗೆ ಬೇಸರ ತರಿಸಿತ್ತು. ಹಾಗಾಗಿ ಮೇಯರ್, ಉಪ ಮೇಯರ್, ಸ್ಥಾಯಿ ಸಮಿತಿ ಚುನಾವಣೆಗಳು ನಡೆದ ಅವಧಿಯಲ್ಲಿ ಮೌನವಾಗಿಯೇ ಕುಳಿತಿದ್ದರು.

ಸ್ಥಾಯಿ ಸಮಿತಿಯು ಬೇಕಿಲ್ಲ

ಮೇಯರ್, ಉಪ ಮೇಯರ್ ಆಯ್ಕೆ ಬಳಿಕ ನಾಲ್ಕು ಸ್ಥಾಯಿ ಸಮಿತಿಗಳಿಗೆ ಚುನಾವಣೆ ನಡೆಯಿತು. ಒಂದೆರಡು ಸ್ಥಾಯಿ ಸಮಿತಿಗೆ ಸದಸ್ಯರಾಗುವಂತೆ ಅನಿತಾ ರವಿಶಂಕರ್ ಅವರಿಗೆ ಪಕ್ಷದ ಪಾಲಿಕೆ ಸದಸ್ಯರು ಕೇಳಿಕೊಂಡರು. ಅನಿತಾ ರವಿಶಂಕರ್ ಅವರ ಪಕ್ಕದಲ್ಲೇ ಕುಳಿತಿದ್ದ ನಿರ್ಗಮಿತ ಮೇಯರ್ ಲತಾ ಗಣೇಶ್ ಅವರು ಸ್ಥಾಯಿ ಸಮಿತಿಗೆ ಹೆಸರು ಬರೆಸುವಂತೆ ತಿಳಿಸಿದರು. ಆದರೆ ಅನಿತಾ ರವಿಶಂಕರ್ ಅವರು ಯಾವುದು ಬೇಡ ಎಂದು ತಲೆ ಆಡಿಸಿದರು.

ವೇದಿಕೆಗೆ ಎಳೆದೊಯ್ದು ವಿಷ್ ಮಾಡಿಸಿದರು

ಇನ್ನು, ನೂತನ ಮೇಯರ್ ಮತ್ತು ಉಪ ಮೇಯರ್’ಗೆ ಸಚಿವ ಕೆ.ಎಸ್.ಈಶ್ವರಪ್ಪ ಸೇರಿದಂತೆ ಬಿಜೆಪಿಯ ಪಾಲಿಕೆ ಸದಸ್ಯರು ಹೂವಿನ ಹಾರ ಹಾಕಿ, ಹೂಗುಚ್ಛ ನೀಡಿ ಶುಭ ಹಾರೈಸಿದರು. ಈ ವೇಳೆ ದೂರದಲ್ಲೇ ನಿಂತು ವೀಕ್ಷಿಸುತ್ತಿದ್ದ ಅನಿತಾ ರವಿಶಂಕರ್ ಅವರು, ಬಳಿಕ ವೇದಿಕೆ ಬಳಿ ಬಂದು ಶುಭ ಹಾರೈಸಿದರು. ಆದರೆ ನಿರ್ಗಮಿತ ಉಪ ಮೇಯರ್ ಚನ್ನಬಸಪ್ಪ ಅವರು, ಅನಿತಾ ರವಿಶಂಕರ್ ಅವರನ್ನು ವೇದಿಕೆಗೆ ಬರುವಂತೆ ಮನವಿ ಮಾಡಿದರು.

84609210 1040944359600317 3617335488072908800 o.jpg? nc cat=106& nc ohc=Dv8u89GE1LsAX ayGTJ& nc ht=scontent.fblr11 1

ಕೊನೆಗೆ ಚನ್ನಬಸಪ್ಪ ಅವರೆ ಅನಿತಾ ರವಿಶಂಕರ್ ಅವರನ್ನು ವೇದಿಕೆಗೆ ಕರೆದೊಯ್ದು ನಿಲ್ಲಿಸಿ, ನೂತನ ಮೇಯರ್, ಉಪ ಮೇಯರ್ ಜೊತೆಗೆ ನಿಲ್ಲಿಸಿ ಫೋಟೊ ಕ್ಲಿಕ್ಕಿಸಿದರು.

ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494

ವಾಟ್ಸಪ್ ನಂಬರ್ | 7411700200

ಈ ಮೇಲ್ ಐಡಿ | shivamoggalive@gmail.com

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : January 29, 2020

Leave a Comment