ಶಿವಮೊಗ್ಗ ಲೈವ್.ಕಾಂ | SHIMOGA NEWS | 21 ಜೂನ್ 2020
ಮಳೆ, ಚಳಿಯಿಂದಾಗಿ ನಡುಗುತ್ತ ರಸ್ತೆ ಬದಿಯಲ್ಲಿ ಆಶ್ರಯ ಪಡೆದು ಮಲಗಿರುವ ನಿರ್ವಸತಿಗರಿಗೆ ಯುವಕರ ತಂಡವೊಂದು ಬೆಚ್ಚನೆಯ ಬೆಡ್ ಶೀಟ್ ವಿತರಿಸಿದೆ. ಸದ್ದಿಲ್ಲದೆ ಈ ಸೇವೆ ಸಲ್ಲಿಸಿರುವ ಯುವಕರ ಕೆಲಸ ಜನರ ಮೆಚ್ಚುಗೆ ಗಳಿಸಿದೆ.
ಮಳೆ, ಚಳಿಯಿಂದ ಬೆಚ್ಚಗಿರಿ
ಶಿವಮೊಗ್ಗದ ಯುವಕರ ತಂಡವೊಂದು ನಗರದ ವಿವಿಧೆಡೆ ಇರುವ ನಿರ್ಗತಿಕರಿಗೆ ಬೆಡ್ ಶೀಟ್ ವಿತರಿಸಿದೆ. ಖಾಸಗಿ ಬಸ್ ನಿಲ್ದಾಣ, ಫುಟ್ ಪಾತ್, ವಿವಿಧ ಬಸ್ ಸ್ಟಾಪ್ಗಳಲ್ಲಿ ಆಶ್ರಯ ಪಡೆದಿರುವ ನಿರ್ಗತಿಕರಿಗೆ ಬೆಚ್ಚನೆ ಬೆಡ್ ಶೀಟ್ ನೀಡಿದ್ದಾರೆ.
ಬೆಡ್ ಶೀಟ್ ಹೊದೆಸಿ, ಕೈ ಮುಗಿದರು
ಶಿವಮೊಗ್ಗದಲ್ಲಿ ಮಳೆಯಾಗುತ್ತಿದೆ, ಚಳಿಯೂ ಹೆಚ್ಚಾಗುತ್ತಿದೆ. ರಸ್ತೆ ಬದಿಯಲ್ಲಿ ಮಲಗಿರುವವರು ಚಳಿ ತಡೆಯಲಾಗದೆ ಗೋಣಿ ಚೀಲ, ಹರಕಲು ಬಟ್ಟೆಗಳನ್ನು ಹೊದ್ದು ಮಲಗುತ್ತಿದ್ದಾರೆ. ಇವರನ್ನು ಪತ್ತೆ ಹಚ್ಚಿ, ಬೆಡ್ ಶೀಟ್ ವಿತರಿಸಿದ ಯುವಕರ ತಂಡ, ಬೆಚ್ಚಗೆ ನಿದ್ರೆ ಮಾಡುವಂತೆ ತಿಳಿಸಿದರು. ಅಲ್ಲದೆ ಆರೋಗ್ಯದೆಡೆಗೆ ಗಮನ ಹರಿಸುವಂತೆ ಸಲಹೆ ನೀಡಿ, ಕೈ ಮುಗಿದು ಬಂದಿದ್ದಾರೆ.

ರಾಹುಲ್ ಗಾಂಧಿ ಹುಟ್ಟುಹಬ್ಬದ ಕೊಡುಗೆ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹುಟ್ಟುಹಬ್ಬದ ಅಂಗವಾಗಿ ಯುವ ಕಾಂಗ್ರೆಸ್ ಕಾರ್ಯಕರ್ತರು ರಾತ್ರಿ ಸದ್ದಿಲ್ಲದೆ ಹೋಗಿ ಬೆಡ್ ಶೀಟ್ ವಿತರಿಸಿದ್ದಾರೆ. ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ್ ಕುಮಾರ್, ರಾಜ್ಯ ಕಾರ್ಯದರ್ಶಿ ಟಿ.ವಿ.ರಂಜಿತ್, ಶಿವಮೊಗ್ಗ ನಗರಾಧ್ಯಕ್ಷ ಹೆಚ್.ಪಿ. ಗಿರೀಶ್, ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ಶರವಣ, ನಗರ ಉಪಾಧ್ಯಕ್ಷ ಕುಮರೇಶ್ , ನಗರ ಪದಾಧಿಕಾರಿಗಳಾದ ಶಂಕರ್, ಕ್ಲೆಮೆಂಟ್, ಅರುಣ್ ಹಾಗೂ ಯುವ ಕಾಂಗ್ರೆಸ್ ಕಾರ್ಯಕರ್ತರು ಇದ್ದರು.

ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200