ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಶಿವಮೊಗ್ಗದ ಲೈವ್.ಕಾಂ | SHIMOGA NEWS | 7 ಜನವರಿ 2022
ಕೆಲಸ ಮುಗಿಸಿ ಬೈಕ್’ನಲ್ಲಿ ಮನೆಗೆ ತೆರಳುತ್ತಿದ್ದ ವ್ಯಕ್ತಿಯೊಬ್ಬ ಸ್ಮಾರ್ಟ್ ಸಿಟಿ ಗುಂಡಿಯೊಳಗೆ ಬಿದ್ದಿದ್ದಾನೆ. ಅದೃಷ್ಟವಶಾತ್ ಆತನ ಪ್ರಾಣ ಉಳಿದೆ.
ಕಳೆದ ರಾತ್ರಿ ಶಿವಮೊಗ್ಗದ ಜೈಲ್ ರಸ್ತೆಯ ಅನ್ನಪೂರ್ಣೇಶ್ವರಿ ಗ್ಯಾರೇಜ್ ಸಮೀಪ ಘಟನೆ ಸಂಭವಿಸಿದೆ.
ಅದೃಷ್ಟವಶಾತ್ ಉಳಿಯಿತು ಪ್ರಾಣ
ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ವ್ಯಕ್ತಿ, ಲಕ್ಷ್ಮೀ ಟಾಕೀಸ್ ಕಡೆಯಿಂದ ಜೈಲ್ ರಸ್ತೆಗೆ ಪ್ರವೇಶಿಸಿದ್ದಾನೆ. ಬೀದಿ ದೀಪಗಳು ಇರದ ಕಾರಣ ಗುಂಡಿ ಇರುವುದು ಗೊತ್ತಾಗಿಲ್ಲ. ಸವಾರ ಗುಂಡಿಯ ಬಳಿಗೆ ಬರುತ್ತಿದ್ದಂತೆ ಅಪಾಯದ ಅರಿವಾಗಿದೆ. ಕೂಡಲೆ ಬೈಕಿನಿಂದ ಜಿಗಿದ್ದಾನೆ.
ಬೈಕ್ ನೇರವಾಗಿ ಗುಂಡಿಯೊಳಗೆ ಬಿದ್ದಿದೆ. ಸವಾರ ಗುಂಡಿಯಿಂದ ಮೇಲೆ ಜಿಗಿದುಕೊಂಡಿದ್ದಾನೆ. ಹಾಗಾಗಿ ಆತನ ಪ್ರಾಣ ಉಳಿದಿದೆ.
ಏನಿದು ಗುಂಡಿ? ಸವಾರನಿಗೇಕೆ ಗೊತ್ತಾಗಲಿಲ್ಲ?
ಒಎಫ್’ಸಿ ಕೇಬಲ್ ಅಳವಡಿಸಲು ರಸ್ತೆಯ ಒಂದು ಭಾಗದಲ್ಲಿ ಗುಂಡಿಗಳನ್ನು ತೆಗೆದು, ಕಾಂಕ್ರಿಟ್ ಹಾಕಲಾಗಿದೆ. ಕಾಮಗಾರಿ ನಡೆಯುತ್ತಿರುವ ಹಿನ್ನೆಲೆ ಗುಂಡಿಗಳನ್ನು ಹಾಗೆ ಬಿಡಲಾಗಿದೆ. ಈ ಗುಂಡಿ ಇರುವ ಕಡೆಯಲ್ಲಿ ಬೀದಿ ದೀಪ ಇಲ್ಲ. ಗುಂಡಿಯ ಮುಂದೆ ಬ್ಯಾರಿಕೇಡ್ ಅಥವಾ ಟೇಪ್ ಹಾಕಬೇಕು. ಗುತ್ತಿಗೆದಾರರು, ಸ್ಮಾರ್ಟ್ ಸಿಟಿ ಅಧಿಕಾರಿಗಳು ಇದನ್ನು ಮಾಡಿಲ್ಲ. ಹಾಗಾಗಿ ಬೈಕ್ ಸವಾರನಿಗೆ ರಾತ್ರಿ ಅಲ್ಲಿ ಗುಂಡಿ ಇರುವುದು ಗೊತ್ತಾಗಿಲ್ಲ.
ಬೈಕ್ ಮೇಲೆತ್ತಲು ಹರಸಾಹಸ
ಗುಂಡಿಗೆ ಬಿದ್ದ ಬೈಕ್ ಮೇಲೆತ್ತಲು ಹರಸಾಹಸ ಮಾಡಬೇಕಾಯ್ತು. ಬೀದಿ ದೀಪ ಇರದ ಹಿನ್ನೆಲೆಯಲ್ಲಿ ಸ್ಥಳೀಯರು ತಮ್ಮ ಮೊಬೈಲ್ ಫೋನ್ ಲೈಟುಗಳನ್ನು ಬೆಳಗಿಸಿ, ಬೈಕ್ ಮೇಲೆತ್ತುವ ಕಾರ್ಯ ನಡಸಿದರು. ಗುಂಡಿಯೊಳಗೆ ಸ್ಥಳೀಯರು, ಬೈಕ್ ಮೇಲೆತ್ತಿದರು. ತರಚಿದ ಗಾಯದ ನೋವಿನಲ್ಲಿದ್ದ ಬೈಕ್ ಸವಾರನಿಗೆ ಆರೈಕೆ ಮಾಡಿ ಕಳುಹಿಸಿದರು.
ಸ್ಮಾರ್ಟ್ ಸಿಟಿ ಅಧಿಕಾರಿಗಳಿಗೆ ಹಿಡಿಶಾಪ
ಮುಂಜಾಗ್ರತಾ ಕ್ರಮ ಕೈಗೊಳ್ಳದಿರುವ ಸ್ಮರ್ಟ್ ಸಿಟಿ ಅಧಿಕಾರಿಗಳ ವಿರುದ್ಧ, ಸ್ಥಳೀಯರು ಹಿಡಿಶಾಪ ಹಾಕಿದರು. ಕಾಮಗಾರಿ ವಿಳಂಬ, ಅವೈಜ್ಞಾನಿಕದ ಆರೋಪದ ನಡುವೆ, ಮುನ್ನೆಚ್ಚರಿಕೆ ವಹಿಸುತ್ತಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.
ಜನರಿಗೆ ಕಾನೂನಿನ ಪಾಠ ಮಾಡುವ ಅಧಿಕಾರಿಗಳು, ಕಾಮಗಾರಿ ಸ್ಥಳದಲ್ಲಿ ಸೂಚನಾ ಫಲಕ ಅಳವಡಿಸಬೇಕು, ಬ್ಯಾರಿಕೇಡ್ ಹಾಕಬೇಕು ಎಂಬ ನ್ಯಾಯಾಲಯದ ಸೂಚನೆಗಳನ್ನು ಪಾಲಿಸದಿರುವುದು ವಿಪರ್ಯಾಸ.

LATEST NEWS
- ಭದ್ರಾವತಿ ಹುತ್ತಾ ಕಾಲೋನಿಯಲ್ಲಿ ಬೈಕ್ ಸಹಿತ ಚಾನಲ್ಗೆ ಬಿದ್ದ ವ್ಯಕ್ತಿ, ಆಗಿದ್ದೇನು?

- ಗೋಪಿ ಸರ್ಕಲ್ನಲ್ಲಿ ಡೊನಾಲ್ಡ್ ಟ್ರಂಪ್ ಹೇಳಿದಂತೆ ನರೇಂದ್ರ ಮೋದಿ ಡಾನ್ಸ್, ಸೌದೆ ಒಲೆ ಅಡುಗೆ

- ಶಿವಮೊಗ್ಗ ಜಿಲ್ಲೆಯ ಕಡಿಮೆಯಾದ ತಾಪಮಾನ, ಇವತ್ತು ಎಲ್ಲೆಲ್ಲಿ ಹೇಗಿರಲಿದೆ ವಾತಾವರಣ?

- ಶಿವಮೊಗ್ಗದ ಸೂಳೆಬೈಲ್ ಮಹಿಳೆ ಅರೆಸ್ಟ್, ₹18,00,000 ಮೊತ್ತದ ಆಭರಣ ಸೀಜ್, ಏನಿದು ಕೇಸ್?

- ಶಿವಮೊಗ್ಗ ವಿದ್ಯಾನಗರದಲ್ಲಿ ಅದ್ಧೂರಿ ಜಾತ್ರೆ, ಯಾವ್ಯಾವ ದಿನ ಏನೇನು ನಡೆಯಲಿದೆ? ಹೇಗಿದೆ ಸಿದ್ಧತೆ?

About The Editor
ನಿತಿನ್ ಆರ್.ಕೈದೊಟ್ಲು





