SHIVAMOGGA LIVE NEWS
SHIMOGA | ಇಲ್ಲಿ ಹೆಜ್ಜೆ ಹೆಜ್ಜೆಗು ಭಯಾನಕ (DANGEROUS POT HOLES) ಗುಂಡಿಗಳಿವೆ. ಕೆಲವಂತು ಪ್ರಾಣ ತೆಗೆಯಲು ಹೊಂಚು ಹಾಕಿ ಕುಳಿತಿವೆ. ಇನ್ನು ಕೆಲವು ಹಂಪುಗಳ ನಡುವೆ ಕದ್ದು ಮಲಗಿವೆ.
ಇದು ನಗರದ ವಿದ್ಯಾನಗರದ ಮುಂದೆ ಹಾದು ಹೋಗಿರುವ ಬಿ.ಹೆಚ್.ರಸ್ತೆಯ ದುಸ್ಥಿತಿ. ಎಂ.ಆರ್.ಎಸ್ ಸರ್ಕಲ್ ನಿಂದ ತುಂಗಾ ನದಿ ಸೇತುವೆ ತನಕ ಈ ರಸ್ತೆಯಲ್ಲಿ ನೂರಾರು ಗುಂಡಿಗಳು ವಾಹನ ಸವಾರರ ರಕ್ತ ಹೀರಲು ಕೈ ಬೀಸಿ ಕರೆಯುತ್ತಿರುತ್ತವೆ.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ. ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200
(DANGEROUS POT HOLES)
ಪ್ರಮುಖ ರಸ್ತೆಯಲ್ಲಿ ಗುಂಡಿಗಳು
ಭದ್ರಾವತಿ ಕಡೆಯಿಂದ ಶಿವಮೊಗ್ಗ ನಗರಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಇದು. ಎಂ.ಆರ್.ಎಸ್ ಸರ್ಕಲ್ ನಿಂದ ಬೈಪಾಸ್ ರಸ್ತೆ ಇದೆ. ಆದರೆ ನಗರದ ವಿವಿಧೆಡೆ ತೆರಳಲು ಈ ರಸ್ತೆಯೆ ಪ್ರಮುಖ ಮಾರ್ಗ. ಹಾಗಾಗಿ ಬಹುತೇಕ ದ್ವಿಚಕ್ರ ವಾಹನಗಳು, ಬಸ್ಸುಗಳು, ಲಾರಿಗಳು ಈ ಮಾರ್ಗದಲ್ಲಿ ಸಂಚರಿಸುತ್ತವೆ. ಈ ರಸ್ತೆಗೆ ಹೊಂದಿಕೊಂಡಂತೆ ಶಾಲೆ, ಕಾಲೇಜು, ಕಚೇರಿಗಳು, ಪ್ರಮುಖ ಮಳಿಗೆಗಳು, ಬಡಾವಣೆಗಳು ಇದ್ದಾವೆ. ಹಾಗಾಗಿ ವಿದ್ಯಾನಗರ ಮುಂದಿನ ಬಿ.ಹೆಚ್.ರಸ್ತೆಯಲ್ಲಿ ಯಾವಾಗಲು ವಾಹನ ದಟ್ಟಣೆ ಇರುತ್ತದೆ. ಇಂತಹ ಪ್ರಮುಖ ರಸ್ತೆಯಲ್ಲಿ ಭಾರಿ ಗಾತ್ರದ ಗುಂಡಿಗಳು (DANGEROUS POT HOLES) ಸೃಷ್ಟಿಯಾಗಿ ವಾಹನ ಸವಾರರ ಜೀವ ಹಿಂಡಲು ಹೊಂಚು ಹಾಕಿ ಕುಳಿತಿವೆ.
(DANGEROUS POT HOLES)
ದಿಢೀರ್ ಗುಂಡಿ ಪ್ರತ್ಯಕ್ಷವಾಗಲಿವೆ
ಅಲ್ಲಲ್ಲಿ ಕೆಲವು ಗುಂಡಿ ಹೊರತು ಬಿ.ಹೆಚ್.ರಸ್ತೆ ಈವರೆಗೂ ಚನ್ನಾಗಿತ್ತು. ಮಳೆಗಾಲ ಆರಂಭವಾಗುತ್ತಿದ್ದ ಹಾಗೆ ಮತ್ತಷ್ಟು ಗುಂಡಿಗಳು ಪ್ರತ್ಯಕ್ಷವಾದವು. ಕೆಲವೆ ದಿನಗಳಲ್ಲಿ ಗುಂಡಿಗಳು ಮತ್ತು ಅವುಗಳ ಗಾತ್ರ ಭಾರಿ ಹೆಚ್ಚಾಗಿದೆ. ಕೆಲವು ಕಡೆ ದೂರದಿಂದ ನೋಡಲು ರಸ್ತೆ ಸಂಪೂರ್ಣ ಚನ್ನಾಗಿದೆ ಅನಿಸುತ್ತದೆ. ಇದೆ ಅಂದಾಜಿನೊಂದಿಗೆ ವಾಹನದ ವೇಗ ಹೆಚ್ಚಿಸುವ ಹೊತ್ತಿಗೆ ದಿಢೀರ್ ಗುಂಡಿ (DANGEROUS POT HOLES) ಪ್ರತ್ಯಕ್ಷವಾಗುತ್ತದೆ. ಇವುಗಳಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಸ್ವಲ್ಪ ಯಾಮಾರಿದರೂ ಅಪಘಾತ ಸಂಭವಿಸುತ್ತದೆ.
ಕ್ಲಿಕ್ ಮಾಡಿ ಇದನ್ನೂ ಓದಿ | ಇನ್ಮುಂದೆ ಪ್ರತಿ ಜೋರು ಮಳೆಗು ಮುಳುಗುತ್ತೆ ವಿದ್ಯಾನಗರ, ಶಾಂತಮ್ಮ ಲೇಔಟ್, ಕಾರಣವೇನು?
ಹೊಳೆ ಬಸ್ ನಿಲ್ದಾಣದ ಬಳಿ ಎನ್.ಸಿ.ಸಿ ಕಚೇರಿ ಮುಂಭಾಗ ರಸ್ತೆಯ ತುಂಬೆಲ್ಲ ಗುಂಡಿಗಳು ಹರಡಿಕೊಂಡಿವೆ. ರಾತ್ರಿ ಹೊತ್ತಲ್ಲಿ ಇಲ್ಲಿ ಲೈಟ್ ಇರುವುದಿಲ್ಲ. ಹಾಗಾಗಿ ವಾಹನ ಸವಾರರಿಗೆ ಗುಂಡಿಗಳ ಅಂದಾಜು ಸಿಗುವುದು ಕಷ್ಟ. ಇದೆ ಕಾರಣಕ್ಕೆ ಬಿದ್ದು, ರಸ್ತೆ ಮೇಲೆ ರಕ್ತ ಸುರಿಸಿದವರಿಗೇನು ಕಡಿಮೆ ಇಲ್ಲ.
ಕ್ಲಿಕ್ ಮಾಡಿ ಇದನ್ನೂ ಓದಿ | 20 ವರ್ಷದಿಂದ ಖಾಲಿ ಬಿಟ್ಟ ಸೈಟಲ್ಲಿ ಮನೆ ಕಟ್ಟಲು 3 ತಿಂಗಳು ಗಡುವು, ತಪ್ಪಿದರೆ ಏನಾಗುತ್ತೆ?
ಇನ್ನು, ಮಹಾದೇವಿ ಟಾಕೀಸ್ ಬಳಿ ಪೈಪ್ ಹಾಕಲು ರಸ್ತೆ ಅಗೆಯಲಾಗಿತ್ತು. ಆ ಗುಂಡಿಗೆ ಬರೀ ಮಣ್ಣು ಮುಚ್ಚಲಾಗಿತ್ತು. ದಿನ ಕಳೆದಂತೆ ಅದರ ಆಳ ಹೆಚ್ಚುತ್ತಲೆ ಇದೆ.
ಗಣೇಶ ಭವನದ ಬಳಿ ಭಾರಿ ಗಾತ್ರದ ಗುಂಡಿಗಳು ಬಾಯ್ತೆರೆದು ಕುಳಿತಿವೆ. ವಾಹನಗಳ ವೇಗ ನಿಯಂತ್ರಣಕ್ಕೆ ವಿಭಿನ್ನ ಹಂಪ್ ಹಾಕಲಾಗಿದೆ. ಕೆಲವು ಗುಂಡಿಗಳು ಈ ಹಂಪುಗಳ ನಡುವೆ ಅಡಗಿ ಕುಳಿತಿವೆ.
ಮತ್ತೂರು ಕ್ರಾಸ್ ಸಮೀಪ ಗುಂಡಿಗೆ ಸಿಮೆಂಟ್ ಮುಚ್ಚಲಾಗಿತ್ತು. ಆದರೆ ಈಗದು ಭಯಾನಕ ರೂಪ ಪಡೆದುಕೊಂಡಿದೆ. ಗುಂಡಿ ತಪ್ಪಿಸುವ ಭರದಲ್ಲಿ ಅಪಘಾತಗಳು ಉಂಟಾಗುತ್ತಿವೆ.
ಕ್ಲಿಕ್ ಮಾಡಿ ಇದನ್ನೂ ಓದಿ | ಸಂಸದ ರಾಘವೇಂದ್ರ ಬ್ಯಾಂಕ್ ಖಾತೆಗೆ ಕನ್ನ ಹಾಕಿ 16 ಲಕ್ಷ ರೂ. ಲಪಟಾಯಿಸಿದ್ದ ಮುಂಬೈ ಹ್ಯಾಕರ್
‘ಈ ರಸ್ತೆಯಲ್ಲಿ ಪ್ರತಿದಿನ ರಾಜಕಾರಣಿಗಳು, ಅಧಿಕಾರಿಗಳು ಎಲ್ಲರು ಓಡಾಡುತ್ತಾರೆ. ಒಂದು ಸರ್ತಿನು ಇಲ್ಲಿ ಗುಂಡಿಗಳು ಯಾಕಿವೆ ಅಂತಾ ಒಬ್ಬರು ಇಳಿದು ನೋಡಿಲ್ಲ. ಇಲ್ಲಿ ದಿನ ಒಂದೊಂದು ಅಪಘಾತ ಆಗುತ್ತಿದೆ. ಮೊದಲು ಸಿಂಗಲ್ ರೋಡ್ ಇದ್ದಾಗಲೆ ಚನ್ನಾಗಿತ್ತು. ಈಗ ಗುಂಡಿಗಳ ಕಾಟ ಒಂದು ಕಡೆಯಾದರೆ ರಸ್ತೆ ಮಧ್ಯೆ ಹಾಕಿರುವ ಲೈಟಿಂಗ್ ಸರಿಯಿಲ್ಲ. ಎದುರಿಗೆ ಯಾರು ರಸ್ತೆ ದಾಟುತ್ತಿದ್ದಾರೆ ಅನ್ನೋದೆ ಗೊತ್ತಾಗಲ್ಲ’ ಅನ್ನುತ್ತಾರೆ ಆಟೋ ಚಾಲಕ ಅಶೋಕ್.
ದೊಡ್ಡ ಮಟ್ಟದ ಅನಾಹುತ ಸಂಭವಿಸುವ ಮೊದಲು ಅಧಿಕಾರಿಗಳು ಗುಂಡಿಗಳಿಗೆ ಮುಕ್ತಿ ನೀಡಬೇಕಿದೆ.
ಕ್ಲಿಕ್ ಮಾಡಿ ಇದನ್ನೂ ಓದಿ | ಮೈಸೂರು – ತಾಳಗುಪ್ಪ ಕುವೆಂಪು ಎಕ್ಸ್ ಪ್ರೆಸ್ ರೈಲು ಕಾಡು ಕೋಣಕ್ಕೆ ಡಿಕ್ಕಿ
ADVERTISEMENT
- ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
- ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422
SHIVAMOGGA LIVE WHATSAPP
ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.