ಶಿವಮೊಗ್ಗ ಲೈವ್.ಕಾಂ | SHIMOGA NEWS | 11 ಆಗಸ್ಟ್ 2020
ಶಿವಮೊಗ್ಗ ಪ್ರವಾಸದಲ್ಲಿದ್ದ ನಟ ವಿಜಯ ರಾಘವೇಂದ್ರ ಅವರ ಕಾರಿಗೆ ಪೆಟ್ರೋಲ್ ಬದಲು ಡೀಸೆಲ್ ಭರ್ತಿ ಮಾಡಲಾಗಿದೆ. ಪ್ರತಿಷ್ಠಿತ ಪೆಟ್ರೋಲ್ ಬಂಕ್ ಒಂದರಲ್ಲಿ ಘಟನೆ ನಡೆದಿದೆ.
ಜೋಗ ಜಲಪಾತಕ್ಕೆ ತೆರಳಿ ಹಿಂತಿರುಗುವ ವೇಳೆ ಶಿವಮೊಗ್ಗ ನಗರದ ಬಂಕ್ ಒಂದರಲ್ಲಿ ಪೆಟ್ರೋಲ್ ಭರ್ತಿ ಮಾಡಿಕೊಳ್ಳಲು ತೆರಳಿದ್ದರು. ಈ ವೇಳೆ ಪೆಟ್ರೋಲ್ ಬದಲು ಡೀಸೆಲ್ ಹಾಕಲಾಗಿದೆ. ಈ ಗೊಂದಲಕ್ಕೆ ಕಾರಣ ತಿಳಿದು ಬಂದಿಲ್ಲ.
ಬೆಂಗಳೂರಿಗೆ ತೆರಳುತ್ತಿದ್ದರು ನಟ
ಬೆಂಗಳೂರಿಗೆ ತೆರಳುವ ವೇಳೆ ಈ ಘಟನೆ ಸಂಭವಿಸಿದೆ. ಕೊನೆಗೆ ಬಂಕ್ ಸಿಬ್ಬಂದಿಗಳು ಮತ್ತು ನಟ ವಿಜಯ ರಾಘವೇಂದ್ರ ಅವರ ನಡುವೆ ಕೆಲ ಹೊತ್ತು ಚರ್ಚೆಯಾಗಿದೆ. ನಂತರ ಕಾರನ್ನು ರಿಪೇರಿಗೆ ಕಳುಹಿಸಿದ್ದಾರೆ. ಬದಲಿ ವ್ಯವಸ್ಥೆ ಮಾಡಿಕೊಂಡು ವಿಜಯ ರಾಘವೇಂದ್ರ ಅವರ ಕುಟುಂಬ ಬೆಂಗಳೂರಿಗೆ ತೆರಳಿದೆ.
ಕಾರು ರಿಪೇರಿಗೆ ಕಳುಹಿಸಿದ ವಿಡಿಯೋ ರಿಪೋರ್ಟ್
https://www.facebook.com/liveshivamogga/videos/425711061736890/?t=0
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]